Thursday, May 16, 2024
spot_imgspot_img
spot_imgspot_img

ವಿಟ್ಲ: ಆರ್.ಕೆ ಕ್ರಿಯೇಷನ್ಸ್ ಹಾಗೂ ಪುನೀತ್ ಪೂಜಾರಿ ಕಡಂಬು ಇವರ ಸಹಯೋಗದೊಂದಿಗೆ 50ಕ್ಕೂ ಅಧಿಕ ಜನರಿಗೆ ದಿನಸಿ ಕಿಟ್ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ಕೊರೊನಾ ಸಂಕಷ್ಟ ಇಡೀ ಪ್ರಪಂಚವನ್ನೇ ನಲುಗಿಸಿದೆ. ಅದೆಷ್ಟೋ ಮಂದಿಯ ಹಿಟ್ಟನ್ನು ಕಸಿದ ಈ ಕೊರೊನಾ ಕಾಲಘಟ್ಟದಲ್ಲಿ ನಮ್ಮ ನೆರವಿಗೆ ನಿಂತವರು ನಮ್ಮವರೇ ಅಂದ್ರೆ ತಪ್ಪಿಲ್ಲ. ಅಂತಹವರಲ್ಲಿ ವಿಟ್ಲದ ಕಡಂಬುವಿನ ಯುವಕ ಪುನೀತ್ ಪೂಜಾರಿ ಕೂಡ ಒಬ್ಬರು. ಮೇಸ್ತ್ರೀ ಕೆಲಸ ಮಾಡುವ ಮಧ್ಯಮ ವರ್ಗದ ಕುಟುಂಬದ ಯುವಕನಾಗಿರುವ ಪುನಿತ್ ತಾವು ದುಡಿದ ಹಣವನ್ನು ಒಟ್ಟುಸೇರಿಸಿ 50 ಕುಟುಂಬಗಳಿಗೆ ಆಹಾರದ ಕಿಟ್ ಒದಗಿಸಿದ್ದಾರೆ.

ಪುನೀತ್ ಪೂಜಾರಿ ಕಡಂಬು ತನ್ನ ಸ್ವಂತ ದುಡಿಮೆಯಲ್ಲಿ ಜನರಿಗೆ ಸಹಾಯ ಮಾಡುವ ಮನಸ್ಸಿನಿಂದ ಆರ್.ಕೆ ಕ್ರಿಯೇಷನ್ಸ್ ಇವರ ಸಹಯೋಗದೊಂದಿಗೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ 50ಕ್ಕೂ ಅಧಿಕ ಜನರಿಗೆ ದಿನಸಿ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆರ್ ಕೆ ಆರ್ಟ್‍ನ ರಾಜೇಶ್ ಕೆ, ಕೃಷ್ಣಯ್ಯ ಕೆ ಅರಮನೆ, ಗೋಕುಲ್ ದಾಸ್ ಶೆಣೈ, ವಿಶ್ವನಾಧ್ ಗೌಡ ಉಪಸ್ಧಿತರಿದ್ದರು.

ಕಿಟ್ ವಿತರಿಸಿದ ಯುವಕ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಶಕ್ತರ ಪಾಲಿಗೆ ನೆರವಾದ ಪುನೀತ್ ಅವರಿಗೆ ದೇವರು ಇನ್ನಷ್ಟು ಅಷ್ಟೈಶ್ವರ್ಯ ಸಿದ್ಧಿಸಲಿ.

- Advertisement -

Related news

error: Content is protected !!