- Advertisement -
- Advertisement -
ಉಡುಪಿ : ತಿಥಿ ಕಾರ್ಯದ ಪೂಜಾ ಕಾರ್ಯಗಳನ್ನು ತನಗೆ ನೀಡಿಲ್ಲ ಎನ್ನುವ ಕಾರಣಕ್ಕೆ ತಿಥಿ ಕಾರ್ಯಕ್ರಮ ನಡಯುತ್ತಿದ್ದ ಮನೆಗೆ ತೆರಳಿ ಪುರೋಹಿತರೊಬ್ಬರು ದಾಂಧಲೆ ನಡೆಸಿ ,ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಉಡುಪಿಯ ಕರ್ಜೆ ಗ್ರಾಮದಲ್ಲಿ ನಡೆದಿದೆ..
ಹೊಸೂರು ಗ್ರಾಮದ ರಾಘವೇಂದ್ರ ಎಂಬವರ ತಾಯಿ ಮೃತಪಟ್ಟಿದ್ದು, ಮೃತರ ಶ್ರಾದ್ದ ಕಾರ್ಯಕ್ರಮ ರಾಘವೇಂದ್ರ ಅವರ ಮನೆಯಲ್ಲೇ ನೆರವೇರಿಸಲಾಗಿತ್ತು. ಆದರೆ, ಶ್ರಾದ್ಧ ಕಾರ್ಯಕ್ರಮಗಳು ಮುಗಿಯುತ್ತಿದ್ದ ಸಮಯದಲ್ಲಿ ಮನೆಗೆ ಬಂದ ಅರ್ಚಕ ರಾಮಕೃಷ್ಣ ಎಂಬವರು ಮನೆಯವರನ್ನು ಅವಾಚ್ಯ ಪದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಕುಟುಂಬನ್ನು ಸರ್ವನಾಶ ಮಾಡುತ್ತೇನೆ ಎಂದು ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -