Tuesday, April 30, 2024
spot_imgspot_img
spot_imgspot_img

ತಾಯಿಯನ್ನು ಹತ್ಯೆಗೈದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಮಗ..!

- Advertisement -G L Acharya panikkar
- Advertisement -

ಹಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ತಾಯಿಯ ಮೇಲೆ ರಾಡ್‍ನಿಂದ ಹಲ್ಲೆ ನಡೆಸಿ ಹತ್ಯೆಗೈದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೊಸಯಲ್ಲಾಪುರದ ಉಡುಪಿ ಓಣಿಯಲ್ಲಿ ನಡೆದಿದೆ.

ಹಲ್ಲೆ ಮಾಡಿದ ಮಗ ರಾಜೇಂದ್ರ ಭಜಂತ್ರಿ (40) ಹಾಗೂ ಹತ್ಯೆಯಾದ ತಾಯಿ ಶಾರದಾ ಭಜಂತ್ರಿ 60) ಎಂದು ಗುರುತಿಸಲಾಗಿದೆ.

ತಾಯಿಗೆ ಬರುತ್ತಿದ್ದ ಪಿಂಚಣಿ ಹಣದ ಮೇಲೆ ರಾಜೇಂದ್ರ ಕಣ್ಣಿಟ್ಟಿದ್ದ. ಅಲ್ಲದೇ ಖಾಲಿ ಜಾಗವನ್ನು ತನಗೆ ಕೊಡುವಂತೆ ತಾಯಿಗೆ ದಂಬಾಲು ಬಿದ್ದಿದ್ದ. ಖಾಲಿ ಜಾಗ ಕೊಡಲು ತಾಯಿ ನಿರಾಕರಿಸಿದ್ದಳು. ಇದೇ ಕಾರಣಕ್ಕಾಗಿ ಜಗಳ ನಡೆದು ತನ್ನ ತಾಯಿಯ ಮೇಲೆ ರಾಡ್‍ನಿಂದ ಹಲ್ಲೆ ನಡೆಸಿ ಆಕೆಯನ್ನು ಹತ್ಯೆಗೈದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!