Monday, May 6, 2024
spot_imgspot_img
spot_imgspot_img

ಪುತ್ತೂರು : ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು : ಚಾಲಕನಿಗೆ ಗಾಯ..!

- Advertisement -G L Acharya panikkar
- Advertisement -

ಪುತ್ತೂರು : ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಹೊಳೆಗೆ ಬಿದ್ದ ಘಟನೆ ಕಾಣಿಯೂರು ಸಮೀಪದ ಬೈತಡ್ಕ ಮಸೀದಿ ಸಮೀಪ ನಡೆದಿದೆ.

ಬೆಳಂದೂರಿನ ಜ್ಯೋತಿಷಿ ಪ್ರಸಾದ್ ಪಂಗಣ್ಣಾಯರ ಮಾರುತಿ ಕಾರು ಬೈತಡ್ಕ ಮಸೀದಿ ಸಮೀಪದ ಹೊಳೆಗೆ ಪಲ್ಟಿಯಾಗಿದ್ದು, ನೀರು ಕಡಿಮೆ ಇದ್ದ ಕಾರಣ ಅವಘಡ ತಪ್ಪಿದಂತಾಗಿದ್ದು, ಪಂಗಣ್ಣಾಯ ರವರು ಅಲ್ಪ-ಸ್ವಲ್ಪ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕಳೆದ ವರ್ಷ ಜುಲೈ ನಲ್ಲಿ ಇದೇ ಸ್ಥಳದಲ್ಲಿ ಕಾರು ಪಲ್ಟಿಯಾಗಿ ಇಬ್ಬರು ಯುವಕರು ನೀರು ಪಾಲಾದ ಘಟನೆ ನಡೆದಿತ್ತು.

- Advertisement -

Related news

error: Content is protected !!