- Advertisement -
- Advertisement -
ಬೆಂಗಳೂರು: ಅಂಗವಿಕಲೆ ಸೋಗಿನಲ್ಲಿ ಕಳ್ಳತನ ಮಾಡ್ತಿದ್ದ ಖತರ್ನಾಕ್ ಮಹಿಳೆಯೊಬ್ಬರನ್ನ ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಮಂಜುಶ್ರೀ (45) ಬಂಧಿತ ಐನಾತಿ ಮಹಿಳೆ.ಬರೋಬ್ಬರಿ 18ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಬಳಿಯಿಂದ 27 ಲಕ್ಷ ಬೆಲೆ ಬಾಳುವ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಈಕೆ ನಗರದ ಕೆ.ಆರ್.ಪುರಂನ ರಾಮಮೂರ್ತಿನಗರ ನಿವಾಸಿಯಾಗಿದ್ದಾಳೆ.ಹಗಲು ವೇಳೆಯಲ್ಲಿ ಸ್ವತಃ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದ ಮಂಜುಳಾ, ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದಳು. ರಾತ್ರಿ ವೇಳೆ ಕಾರಿನಲ್ಲಿ ಏಕಾಂಗಿಯಾಗಿ ಎಂಟ್ರಿ ನೀಡಿ ಟಾರ್ಗೆಟ್ ಇದ್ದ ಮನೆಯಿಂದ ದೂರದಲ್ಲೆ ಕಾರನ್ನ ನಿಲ್ಲಿಸುತ್ತಿದ್ದಳು. ಕಾರಿನಿಂದ ಇಳಿದು ಅಂಗವಿಕಲೆಯಂತೆ ಕುಂಟುತ್ತಾ ಬರುತ್ತಿದ್ದಳು. ಬಳಿಕ ತನ್ನ ಬಳಿಯಿದ್ದ 100ಕ್ಕೂ ಹೆಚ್ಚು ಕೀ ಬಳಸಿ ಬೀಗ ಓಪನ್ ಮಾಡ್ತಿದ್ದಳು. ನಂತರ ಕಳ್ಳತನ ಮಾಡಿ ವಾಪಸ್ಸಾಗುತ್ತಿದ್ದಳು ಎನ್ನಲಾಗಿದೆ.
- Advertisement -