Monday, April 29, 2024
spot_imgspot_img
spot_imgspot_img

ವಿಟ್ಲ: ಭಾರತ್ ಸ್ಕೌಟ್ & ಗೈಡ್ಸ್ ವತಿಯಿಂದ “ಚಿಂತನಾ ದಿನ” ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಭಾರತ್ ಸ್ಕೌಟ್ &ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ಸ್ಥಳೀಯ ಸಂಸ್ಥೆ ವಿಟ್ಲ ಇದರ ಆಶ್ರಯದಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಸವನಗುಡಿ ವಿಟ್ಲ ಇಲ್ಲಿ ಚಿಂತನಾ ದಿನವನ್ನು ಆಚರಿಸಲಾಯಿತು.

ಸರ್ವಧರ್ಮ ಪ್ರಾರ್ಥನೆಯನ್ನು ಮಾಡಲಾಯಿತು. ನಂತರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರತೀಪ್ ರವರು ಚಿಂತನ ದಿನದ ಮಹತ್ವದ ಕುರಿತು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ್ ಅಡ್ವಾಳ್ ರವರು ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಪಡಿಯಾರ್ ರವರು ವಹಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ವಿಠ್ಠಲ್ ಜೆ ಸಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಅಧಿಕಾರಿಯಾದ ರಾಧಾಕೃಷ್ಣ, ಪ್ರಾಂಶುಪಾಲರಾದ ಜಯರಾಮ್ ರೈ, ಉಪ ಪ್ರಾಂಶುಪಾಲೆಯಾದ ಜ್ಯೋತಿಶೆನೈ, ಸ್ಥಳೀಯ ಸಂಸ್ಥೆಯಸದಸ್ಯರಾದ ಮೋಹನ್ ಕಟ್ಟೆ, ಕಾರ್ಯದರ್ಶಿಗಳಾದ ಪ್ರತೀಪ್, ವಿಠಲ ಪ್ರೌಢಶಾಲೆಯ ಗೈಡ್ ಶಿಕ್ಷಕಿ ವೀಣಾ, ಸಂತರೀಟಾ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಶಿಕ್ಷಕಿ ರೋಸ್ಲಿನ್, ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಶಿಕ್ಷಕಿ ಜಯಶ್ರೀ ಸ್ಕೌಟ್ ಶಿಕ್ಷಕಿ ನಮಿತಾ, ಹಾಗೂ ವಿಠ್ಠಲ್ ಜೆ ಸಿಸ್ ಮಾಧ್ಯಮ ಶಾಲೆ, ಸಂತರೀಟಾ ಆಂಗ್ಲ ಮಾಧ್ಯಮ ಶಾಲೆ, ವಿಠಲ ಪ್ರೌಢಶಾಲೆ, ಇಲ್ಲಿಯ ಸ್ಕೌಟ್ ಗೈಡ್ ಮಕ್ಕಳು ಭಾಗವಹಿಸಿದರು.

- Advertisement -

Related news

error: Content is protected !!