- Advertisement -
- Advertisement -
ಕಾರೊಂದು ಟ್ರಕ್ಗೆ ಗುದ್ದಿದ ಪರಿಣಾಮ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಕಟೋಲ್ ತಾಲೂಕಿನ ಸೋನ್ಖಾಂಬ್ ಬಳಿ ನಡೆದಿದೆ. ಏಳು ಜನರನ್ನು ತುಂಬಿದ್ದ ಕಾರು ನಾಗ್ಪುರದಿಂದ ಕಟೋಲ್ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಟ್ರಕ್ಗೆ ಬಲವಾಗಿ ಗುದ್ದಿದೆ.
ಮೃತರು ಒಂದೇ ಗ್ರಾಮದವರಾಗಿದ್ದು, ಅಜಯ್ ದಶರತ್ ಚಿಖ್ಲೆ (45), ವಿಠ್ಠಲ್ ದಿಗಂಬರ್ ತೋಟೆ (45), ಸುಧಾಕರ ರಾಮಚಂದ್ರ ಮಾನಕರ್ (42), ರಮೇಶ್ ಓಂಕಾರ್ ಹೆಲೊಂಡೆ (48), ಮಯೂರ್ ಮೊರೇಶ್ವರ್ ಇಂಗ್ಲೆ (26) ಮತ್ತು ವೈಭವ್ ಸಾಹೇಬ್ರಾವ್ (32) ಎಂದು ಗುರುತಿಸಲಾಗಿದೆ. ಗಾಯಾಳುವನ್ನು ನಾಗ್ಪುರ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -