- Advertisement -
- Advertisement -
ಉಡುಪಿ: ಸ್ತ್ರೀಸೇವಾ ನಿಕೇತನದ ಬಾತ್ ರೂಂ ಕಿಟಕಿ ತಂತಿ ಮುರಿದು ಮಹಿಳೆ ಪರಾರಿಯಾಗಿರುವ ಘಟನೆ ಉಡುಪಿಯ ನಿಟ್ಟೂರಿನಲ್ಲಿ ನಡೆದಿದೆ.
ಸ್ತ್ರೀಸೇವಾ ನಿಕೇತನಕ್ಕೆ ಒಂದು ತಿಂಗಳ ಹಿಂದೆ ದಾಖಲಾಗಿದ್ದ ಮಹಿಳೆ ಜೂ.14ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ತಪ್ಪಿಸಿಕೊಂಡಿದ್ದಾರೆ. ಮಣಿಯಮ್ಮ ಯಾನೆ ವಿದ್ಯಾ ಶೆಟ್ಟಿಯಾರ್ ಎಂಬವರು ಬಾತ್ ರೂಂನ ಮೇಲಿನ ಕಿಟಕಿಯ ಕಬ್ಬಿಣದ ತಂತಿಯನ್ನು ಮುರಿದು ತಪ್ಪಿಸಿಕೊಂಡು ಹೋಗಿರುವುದಾಗಿ ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಸಿಂಧು ಆರ್.ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -