- Advertisement -
- Advertisement -
ಉಡುಪಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಿರ್ಮಿತಾ (19) ಮೃತಪಟ್ಟ ದುರ್ದೈವಿ.
ಜೂನ್ 18 ರಂದು ಭಾನುವಾರ ನಡೆದ ಈ ದುರ್ಘಟನೆಯಲ್ಲಿ ಶಶಾಂಕ್ (21) ಸ್ಥಳದಲ್ಲೇ ಮೃತಪಟ್ಟಿದ್ದರು. ಶಶಾಂಕ್ ಮತ್ತು ನಿರ್ಮಿತಾ ಇಬ್ಬರೂ ಉಡುಪಿಯ ಬಾರ್ಕೂರಿನ ನಾಗರಮಠದವರು. ಭಾನುವಾರ ಆಗುಂಬೆ ಘಾಟ್ನಲ್ಲಿ ಇವರಿಬ್ಬರು ಎದುರಿನಿಂದ ಬರುತ್ತಿದ್ದ ಬಸ್ಗೆ ಬೈಕ್ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು. ಇಬ್ಬರೂ ಸಂಬಂಧಿಕರಾಗಿದ್ದು, ಕುಟುಂಬದ ಆರು ಮಂದಿ ಭಾನುವಾರ ಆಗುಂಬೆ ಸೂರ್ಯಾಸ್ತದ ಸ್ಥಳಕ್ಕೆ ಹೋಗಿದ್ದರು. ಶಶಾಂಕ್ ಇಂಜಿನಿಯರಿಂಗ್ ಮುಗಿಸಿ ಗುತ್ತಿಗೆದಾರರೊಬ್ಬರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು.
- Advertisement -