Friday, April 26, 2024
spot_imgspot_img
spot_imgspot_img

ಬಡವಿದ್ಯಾರ್ಥಿನಿ ಕುಟುಂಬಕ್ಕೆ ಆಸರೆಯಾದ ನಿವೃತ್ತ ಮುಖ್ಯಶಿಕ್ಷಕರು

- Advertisement -G L Acharya panikkar
- Advertisement -

ಉಡುಪಿ(ನ.2): ನಿವೃತ್ತ ಮುಖ್ಯಶಿಕ್ಷಕರೊಬ್ಬರು ಬಡವಿದ್ಯಾರ್ಥಿನಿ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಉಡುಪಿಯ ನಿಟ್ಟೂರು ಅನುದಾನಿತ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಈ ಮಾನವೀಯ ಕಾರ್ಯ ಮಾಡಿದವರು.

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಯನಾ ಎನ್ನುವ ವಿದ್ಯಾರ್ಥಿನಿಯ ಮನೆ ಹಳೆಯದಾಗಿ, ಹುತ್ತ ಬೆಳೆದಿತ್ತು. ಈ ಹಿನ್ನೆಲೆ ಆಕೆಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ತಮ್ಮ ನಿವೃತ್ತಿ ಹಣದಲ್ಲಿ 4.30 ಲಕ್ಷ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿಸಿಕೊಟ್ಟಿದ್ದು ಪೇಜಾವರ ಶ್ರೀಗಳ ಸವಿ ನೆನಪಿಗಾಗಿ ಮನೆಗೆ ವಿಶ್ವೇಶ ಹೆಸರನ್ನು ಇಡಲಾಗಿದೆ.

- Advertisement -

Related news

error: Content is protected !!