- Advertisement -
- Advertisement -
ಮಂಗಳೂರು: ದೇವಾಲಯದಿಂದ ಬೈಕ್ ಮತ್ತು ಕಾಣಿಕೆ ಡಬ್ಬಿ ಕದ್ದ ಆರೋಪದ ಮೇಲೆ ಒರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಾಂಟೆಪಾಡವ ಮೂಲದ ತಾರನಾಥ ಮೋಹನ್ ಎಂದು ಗುರುತಿಸಲಾಗಿದೆ. ಅವರು ಉಳ್ಳಾಲದ ವಿಶ್ವ ಹಿಂದು ಪರಿಷತ್ (ವಿಎಚ್ಪಿ) ನ ಮಾಜಿ ಸಂಚಾಲಕ ಎನ್ನಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಾರ್ಚ್ 7 ರ ಭಾನುವಾರ ಮಧ್ಯರಾತ್ರಿಯಲ್ಲಿ ಈ ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತರನಾಥ ಮೋಹನ್ ಅವರು ಮಂಜನಾಡಿ ದೇವಸ್ಥಾನದಿಂದ ಕಾಣಿಗೆ ಡಬ್ಬಿ ಮತ್ತು ಮೋಟಾರು ಬೈಕನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.
- Advertisement -