- Advertisement -
- Advertisement -
ಉಳ್ಳಾಲ: ತಲಪಾಡಿ ಟೋಲ್ ಪ್ಲಾಝಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಶೆಟ್ಟಿ ಎಂಬವರ ಶವ ತಲಪಾಡಿ ಬಳಿಯ ನಾರ್ಲ ಪಡೀಲಿನ ನಿರ್ಜನ ಪ್ರದೇಶದ ಕೆರೆಯೊಂದರಲ್ಲಿ ಪತ್ತೆಯಾಗಿದೆ. ನಾರ್ಲ ಪಡೀಲ್ ಕೇರಳ ಕರ್ನಾಟಕದ ಗಡಿ ಪ್ರದೇಶವಾಗಿದ್ದು ಇಲ್ಲಿನ ನಿರ್ಜನ ಪ್ರದೇಶದಲ್ಲಿರುವ ಕೆರೆಯಲ್ಲಿ ಈಜಾಡಲು ಸ್ಥಳೀಯರು ಬಂದಾಗ ಶವ ಪತ್ತೆಯಾಗಿದ್ದು ಬಳಿಕ ಕೆರೆಯಿಂದ ಮೃತದೇಹ ಮೇಲಕ್ಕೆತ್ತಿದ್ದಾರೆ.
ಇದನ್ನೂ ಓದಿ: ತಾಯಿಯನ್ನು ಕರಾಟೆ ಬೆಲ್ಟ್ನಿಂದ ಹಿಸುಕಿ ಕೊಂದ ಪಾಪಿ ಪುತ್ರಿ!
ರಾಜೇಶ್ ಅವರು ಸಂಜೆ 4 ಗಂಟೆಗೆ ಟೋಲ್ ಪ್ಲಾಝಾದಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದರು ಎನ್ನಲಾಗಿದೆ. ನಂತರ ಮನೆಯಿಂದ ಹೊರ ಹೋದವರು ಸಂಜೆ ವೇಳೆ ಶವವಾಗಿ ಪತ್ತೆಯಾಗಿದ್ದಾರೆ. ರಾಜೇಶ್ ಶೆಟ್ಟಿಯವರ ಸಾವು ಹೇಗೆ ಸಂಭವಿಸಿತೆಂದು ತಿಳಿದು ಬಂದಿಲ್ಲ. ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತ ರಾಜೇಶ್ ಅವರು ಪತ್ನಿ ಎರಡು ಪುತ್ರಿಯರು, ಓರ್ವ ಪುತ್ರನನ್ನ ಅಗಲಿದ್ದಾರೆ.
- Advertisement -