Saturday, April 27, 2024
spot_imgspot_img
spot_imgspot_img

ಅತ್ಯಾಚಾರ-ಕೊಲೆ ಪ್ರಕರಣ: ಐವರು ಶಂಕಿತರು ಪೊಲೀಸರ ವಶಕ್ಕೆ

- Advertisement -G L Acharya panikkar
- Advertisement -

ಉಳ್ಳಾಲ: ಸೆಪ್ಟೆಂಬರ್ 25ರಂದು ಕಣಂತೂರು ಬೆಳ್ಳೇರಿ ಸಮೀಪ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಮಂಗಳೂರು ದಕ್ಷಿಣ ಎಸಿಪಿ ನೇತೃತ್ವದ ಪೊಲೀಸ್ ತಂಡ ಶಂಕಿತ ಐವರನ್ನು ವಶಕ್ಕೆ ಪಡೆದಿದ್ದಾರೆ.

50 ವರ್ಷದ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗ್ಯಾಸ್ ಸ್ಟೌವ್​​​ ತೆರೆದ ಸ್ಥಿತಿಯಲ್ಲಿ ಮತ್ತು ಮನೆಯ ಕರ್ಟೈನ್​​ಗೆ ಬೆಂಕಿ ಹಾಕಿರುವ ದುಷ್ಕರ್ಮಿಗಳು, ಪ್ರಕರಣ ತಿರುಚುವ ಪ್ರಯತ್ನ ಮಾಡಿದ್ದರು. ಇದರಿಂದಾಗಿ ಪೊಲೀಸರ ತನಿಖೆಗೆ ಅಡಚಣೆಯಾಗಿತ್ತು. ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿದ್ದರಿಂದ ಫಾರೆನ್ಸಿಕ್ ತಂಡಕ್ಕೂ ಕಷ್ಟಸಾಧ್ಯವಾಗಿತ್ತು.

ಆದರೆ ದುಷ್ಕರ್ಮಿಗಳು ಬಟ್ಟೆಯನ್ನು ಎಳೆದ ರೀತಿ, ಬಾಗಿಲು ತೆರೆದಿರುವುದು, ಮೈ ಮೇಲಿದ್ದ ಚಿನ್ನಾಭರಣ ನಾಪತ್ತೆಯಾಗಿರುವುದರಿಂದ ಕೃತ್ಯದ ಮೇಲಿನ ಶಂಕೆ ದಟ್ಟವಾಗಿತ್ತು. ಅದರಂತೆ ಮೂರು ತಂಡಗಳನ್ನು ರಚಿಸಿ ನಡೆಸಿದ ತನಿಖೆಯಲ್ಲಿ, ಮಹಿಳೆ ಮೇಲೆ ನಡೆದ ಹೀನ ಕೃತ್ಯದಲ್ಲಿ ಖತರ್ನಾಕ್​​ ಗ್ಯಾಂಗ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸದ್ಯ ಶಂಕಿತ ಐವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!