Wednesday, May 1, 2024
spot_imgspot_img
spot_imgspot_img

ವಿಟ್ಲ: ತೀವ್ರ ಹದಗೆಟ್ಟ ರಸ್ತೆ..! ಜಿಲ್ಲಾ ಪಂಚಾಯತ್‌ಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರಧಾನಿ ಕಾರ್ಯಾಲಯ ವರದಿ; ಮುಂದಿನ ಚುನಾವಣೆ ಬಹಿಷ್ಕಾರ ಹಾಗೂ ಉಗ್ರ ಹೋರಾಟದ ಎಚ್ಚರಿಕೆ

- Advertisement -G L Acharya panikkar
- Advertisement -

ವಿಟ್ಲ:– ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಬಿಲ್ಲಂಪದವು – ನೆಗಳಗುಳಿ ಶಾಲಾ ರಸ್ತೆಯು ತೀವ್ರ ಹದಗೆಟ್ಟಿತ್ತು. ರಸ್ತೆಯು ಅಲ್ಲಲ್ಲಿ ಕೆಟ್ಟು ಹೋದುದರಿಂದ ತುರ್ತು ಸಂದರ್ಭದಲ್ಲಿ ಯಾವುದೇ ವಾಹನದವರು ಈ ಬಾಗಕ್ಕೆ ಬರದಿರುವುದಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಮನವಿ ಮಾಡಿ ಅಲ್ಲಿಂದ ಕಾಮಾಗಾರಿ ಮಾಡಿ ಎಂದು ಆದೇಶ ಬಂದರೂ ಅಭಿವೃದ್ಧಿ ಕಾರ್ಯಕ್ಕೆ ಮೀನಾಮೇಷ ಎಣಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರಧಾನಿ ಕಾರ್ಯಾಲಯಕ್ಕೆ ಪತ್ರ: ತಕ್ಷಣ ಕ್ರಮಕೈಗೊಳ್ಳಲು ಜಿ. ಪಂ ಗೆ ಆದೇಶ
ಸುಮಾರು 50 ಮನೆಯವರಿಗೆ ಸಂಪರ್ಕದ ಏಕೈಕ ರಸ್ತೆ ಇದಾಗಿದ್ದು ಎಲ್ಲ ಜನರು ಈ ರಸ್ತೆಯನ್ನು ಅವಲಂಬಿಸುವಂತಾಗಿದೆ. ಮಳೆಗಾಲದಲ್ಲಿ ಅಗತ್ಯ ವಸ್ತುಗಳನ್ನು ತಲೆಯಲ್ಲಿ ಹೊತ್ತು ಕೊಂಡು ಹೋಗುವ ಪರಿಸ್ಥಿತಿ ಈ ಊರಿನವರದ್ದಾಗಿದೆ.

ಈ ರಸ್ತೆಗೆ ಯಾವುದೇ ಅನುದಾನ ಬರದ ಕಾರಣ ನೆಗಳಗುಳಿಯ ಯುವಕ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಈ ರಸ್ತೆಯ ಸ್ಥಿತಿಗತಿಯ ಬಗ್ಗೆ ತಿಳಿಸಿ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ ಮನವಿ ಮಾಡಿದ್ದರು. ಈ ಮನವಿಯನ್ನು ಸ್ವೀಕರಿಸಿದ ಪ್ರಧಾನಮಂತ್ರಿ ಕಾರ್ಯಾಲಯವು ಜಿಲ್ಲಾ ಪಂಚಾಯತ್ ಮಂಗಳೂರಿಗೆ ಈ ರಸ್ತೆಯನ್ನು ತಕ್ಷಣ ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳಲು ವರದಿಯನ್ನು ನೀಡಿತು. ಈ ಮನವಿಯನ್ನು ಸ್ವೀಕರಿಸಿದ ಜಿಲ್ಲಾ ಪಂಚಾಯತ್ ಮಂಗಳೂರು, ಅಳಿಕೆ ಗ್ರಾಮ ಪಂಚಾಯತ್ ಗೆ ಈ ರಸ್ತೆಯನ್ನು ಪರಿಶೀಲಿಸಿ ಕ್ರಮ ಕೆಗೊಳ್ಳಲು ತಿಳಿಸಿತ್ತು.

ಈ ರಸ್ತೆಯನ್ನು ಪರಿಶೀಲಿಸಿ ಕ್ರಮ ಕೆಗೊಳ್ಳಲು ಪ್ರಧಾನಿ ಕಾರ್ಯಾಲಯ ತಿಳಿಸಿತ್ತು. ಆದರೆ ಈ ರಸ್ತೆಗೆ ಅಭವೃದ್ಧಿಗೆ ತಮ್ಮಲ್ಲಿ ಬೇಕಾದ ಅನುದಾನ ವಿಲ್ಲ ಎಂದು ತಿಳಿಸಿತ್ತು. ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ಮಂಗಳೂರು ಈ ರಸ್ತೆಯು 1.50ಕಿ.ಮೀ ಉದ್ದ ವಿದ್ದು ಇದಕ್ಕಾಗಿ ಅಂದಾಜು 105 ಲಕ್ಷ ವೆಚ್ಚವಾಗುತ್ತದೆ ಈ ಕಡತವನ್ನು ಜಿಲ್ಲಾ ಪಂಚಾಯತ್ ಮಂಗಳೂರಿಗೆ ಕಳುಹಿಸಲಾಗಿದೆ. ರಸ್ತೆ ದುರಸ್ತಿಗೆ ಬೇಕಾದ ಈ ಮೊತ್ತ ತಮ್ಮಲ್ಲಿ ಇಲ್ಲ ಹಾಗೂ ಈ ಕಡತವನ್ನು ಕರ್ನಾಟಕ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

2017 ರಲ್ಲಿ ಈ ರಸ್ತೆ ದುರಸ್ತಿಯ ಬಗ್ಗೆ ತಯಾರಾದ ಕರ್ಣಾಟಕ ಸರಕಾರದ ಕಡತ(RRC 278) ವಿಧಾನ ಸೌದದಲ್ಲಿ ಇದ್ದು ಈ ರಸ್ತೆ ದುರಸ್ಥಿಯ ಕಡತದ ದ ಬಗ್ಗೆ ಸ್ಥಳೀಯ ಶಾಸಕರಲ್ಲಿ ಹಲವು ಬಾರಿ ಮನವಿ ಮಾಡಿದರೂ ಯಾವುದು ಫಲ ಕಾಣಲಿಲ್ಲ. ಶಾಸಕರು ಕೇವಲ 50 ಸಾವಿರದ ಅನುದಾನವನ್ನು ಒದಗಿಸಿ ಕೇವಲ 50 ಮೀಟರ್ ಕಾಂಕ್ರಿಟ್ ಮಾಡಿಸಿ, ಊರಿನವರ ಬಾಯಿ ಮುಚ್ಚಲು ಹೊರಟಿದ್ದಾರೆ. ಊರಿನ ನಾಗರಿಕರು ಈ ರಸ್ತೆಯ ದುರಸ್ಥಿಯುು ತಕ್ಷಣ ಆಗಬೇಕೆಂದು ಒಂದು ನೆಗಳಗುಳಿ ರಸ್ತೆ ಹಿತರಕ್ಷಣಾ ವೇದಿಕೆಯನ್ನು ಮಾಡಿಕೊಂಡು ಈ ರಸ್ತೆಯ ಅಭಿವೃದ್ಧಿಯು ತಕ್ಷಣ ಆಗದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ ಹಾಗೂ ಉಗ್ರ ಹೋರಾಟದ ಎಚ್ಚರಿಕೆ ಮಾಡಲು ಮುಂದಾಗಿದ್ದಾರೆ.

ಮುಂದಿನ ಚುನಾವಣೆ ಬಹಿಷ್ಕಾರ ಹಾಗೂ ಉಗ್ರ ಹೋರಾಟದ ಎಚ್ಚರಿಕೆ
“ಕಳೆದ 6 ವರ್ಷಗಳಿಂದ ಈ ರಸ್ತೆ ದುರಸ್ತಿಯ ಬಗ್ಗೆ ಬೇಡಿಕೆಯನ್ನು ಇಡಲಾಗಿದೆ. ಸತತ ಮನವಿಯನ್ನೂ ನೀಡಿದ್ದೇವೆ. ಆದರೆ ನಮ್ಮ ಕೂಗನ್ನು ಯಾರೂ ಹೇಳುತ್ತಿಲ್ಲ. ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ, ಜನಪ್ರತಿನಿಧಿಗಳಿಗೆ, ಸರಕಾರಿ ಇಲಾಖೆಗಳಿಗೆ ಮನವಿ ನೀಡಿ ಸಾಕಾಗಿದೆ ಅಲ್ಲದೆ ಯಾವುದೇ ಪ್ರಯೋಜನ ಆಗಲಿಲ್ಲ. ಅಭಿವೃದ್ಧಿ ಕಾಣದ ಬಿಲ್ಲಂಪದವು – ನೆಗಳಗುಳಿ ರಸ್ತೆಯನ್ನು ಈ ಬಾರಿ ಅಭಿವೃದ್ಧಿ ಪಡಿಸಲು ಅನುದಾನ ಮಂಜೂರು ಮಾಡದಿದ್ದರೆ, ಮುಂದಿನ 2024 ರ ಚುನಾವಣೆಯನ್ನು ಬಹಿಷ್ಕರಿಸಿ,ಉಗ್ರ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ನಾವು ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮಗೆ ರಸ್ತೆಯ ದುರಸ್ಥಿಯೇ ಮುಖ್ಯವಾಗಿದೆ. ದಿನಂಪ್ರತಿ ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವುದೇ ನಮಗೆ ಒಂದು ದೊಡ್ಡ ಸವಾಲಾಗಿದೆ. ಡಿ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ನೆಗಳಗುಳಿ ನಾಗರಿಕರು ಒಟ್ಟು ಸೇರಿ ಹೋರಾಟದ ಬಗ್ಗೆ ರೂಪುರೇಷೆ ಸಿದ್ದಪಡಿಸುತ್ತಿದ್ದೇವೆ” ಎಂದು ಮಾಧ್ಯಮಕ್ಕೆ ರಮೇಶ ನೆಗಳಗುಳಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!