ವಿಟ್ಲ: ವ್ಯಕ್ತಿಯೋರ್ವರಿಗೆ ಅವ್ಯಾಚವಾಗಿ ಬೈದು, ಕೊಲೆ ಬೆದರಿಕೆ ಹಾಕಿ, ಹಲ್ಲೆ ಮಾಡಿದ ಘಟನೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದಲ್ಲಿ ನಡೆದಿದೆ.
ಅನಂತಾಡಿ ಗ್ರಾಮ, ಬಂಟ್ವಾಳ ನಿವಾಸಿ ತೀರ್ಥಪ್ರಸಾದ್ ಗೌಡ (35) ಎಂಬರಿಗೆ ಹಾಗೂ ಅವರ ಪತ್ನಿಯ ನಡುವೆ ವೈವಾಹಿಕ ಮನಸ್ತಾಪಗಳಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣದ ಮತ್ತೋರ್ವ ಆರೋಪಿ ಗಂಗಾಧರ ಎಂಬಾತನೊಂದಿಗೆ ಕೂಡ ಮನಸ್ತಾಪವಾಗಿರುತ್ತದೆ.
ದಿನಾಂಕ:23-01-2024 ರಂದು ರಾತ್ರಿ ಸಮಯ ತೀರ್ಥಪ್ರಸಾದ್ ಗೌಡರವರು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ನಡುಮನೆ ಎಂಬಲ್ಲಿ ರಸ್ತೆಯಲ್ಲಿದ್ದಾಗ, ಆರೋಪಿಗಳಾದ ಶರ್ಮಿಳಾ, ಗಂಗಾಧರ, ಧರ್ಣಪ್ಪಗೌಡ ,ಅಜಯ್, ಸತೀಶ ,ಜೀವನ್ , ಗಿರಿಯಪ್ಪಗೌಡ ಎಂಬವರು ಬೇರೆ ಬೇರೆ ವಾಹನಗಳಲ್ಲಿ ಬಂದು ತೀರ್ಥಪ್ರಸಾದ್ರಿಗೆ ಕೈಯಿಂದ ಹಲ್ಲೆ ಮಾಡಿ , ಅವ್ಯಾಚವಾಗಿ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ, ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 12/2024 ಕಲಂ: 143,147,323,504,506 ಜೊತೆಗೆ 149 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.