- Advertisement -




- Advertisement -
ಉಪ್ಪಿನಂಗಡಿ: ಯುವಕನೋರ್ವ ನಾಪತ್ತೆಯಾದ ಘಟನೆ ನೆಲ್ಯಾಡಿ ಗ್ರಾಮದ ಸರೋಳಿಕೆರೆ ಎಂಬಲ್ಲಿ ನಡೆದಿದೆ. ಶಿವದಾಸ್ ಎಂಬವರ ಪುತ್ರ ಸುಜೀತ್ ಕುಮಾರ್ (21) ನಾಪತ್ತೆಯಾದ ಯುವಕ.
ಇವರು ಸೆ.15ರಂದು ರಾತ್ರಿ 9 ರಿಂದ ಸೆ.16ರಂದು ನಸುಕಿನ ಜಾವ 3.30ರ ಅವಧಿಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಹಿಂದಿ, ಕನ್ನಡ, ಮಲಯಾಳ ಹಾಗೂ ತುಳು ಮಾತನಾಡುತ್ತಾರೆ ಎಂದು ಈತನ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -