ಉಪ್ಪಿನಂಗಡಿ: ದಾರಿ ಬಿಡುವ ವಿಚಾರದಲ್ಲಿ ಕಾರಿನಲ್ಲಿ ಬಂದ ತಂಡ ತರಕಾರಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಅಮೈ ಸೇತುವೆ ಬಳಿ ನಡೆದಿದೆ.
ಘಟನೆಯಲ್ಲಿ ಹಾಸನ ಜಿಲ್ಲೆಯ ಶಾಂತಿನಗರ ನಿವಾಸಿ ಚಂದು ಎಮ್ ಕೆ (24) ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರು ಚಾಲಕ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಚಂದು ರವರು ತರಕಾರಿ ಸಾಗಾಟ ಮಡುವ ಲಾರಿಯಲ್ಲಿ ಚಾಲಕರಾಗಿದ್ದು, ಮದ್ಯಾಹ್ನ ಹಾಸನಕ್ಕೆಂದು ಬೈಕಂಪಾಡಿಯಿಂದ ಲಾರಿ ಚಲಾಯಿಸಿಕೊಂಡು ಮಂಗಳೂರು-ಬೆಂಗಳೂರು ರಸ್ತೆಯಲ್ಲಿ ತೆರಳುತ್ತಿದ್ದಾಗ ಉಪ್ಪಿನಂಗಡಿಯ ಪೆರ್ನೆ ಗ್ರಾಮದ ಅಮೈ ಸೇತುವೆ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಕಾರು ಮತ್ತು ಚಾಲಕ ಲಾರಿಯನ್ನು ಓವರ್ ಟೇಕ್ ಮಾಡಿ ಲಾರಿಗೆ ಅಡ್ಡ ತಡೆದು ನಿಲ್ಲಿಸಿ ಕಾರಿನ ಚಾಲಕ ಮತ್ತು ಇತರ 3 ಜನ ಇಳಿದು ಬಂದು ಲಾರಿ ಚಾಲಕನನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದಿದ್ದಾರೆ.
ಅಲ್ಲದೇ ಉಳಿದ ಮೂರು ಜನರು ಜೋರಾಗಿ ಬೊಬ್ಬೆ ಹಾಕಿ ನಿಕ್ ಸೈಡ್ ಕೊರಿಯಾರ ಆಪುಜಯ? ಎಂದು ತುಳು ಭಾಷೆಯಲ್ಲಿ ಬೈದು ಲಾರಿ ಚಾಲಕನನ್ನು ಸೀಟಿನಿಂದ ಎಳೆದು ಕೆಳಗೆ ಹಾಕಿ ಕಾರಿನ ಚಾಲಕ ಕಾರಿನಲ್ಲಿದ್ದ ಗಾಜಿನ ಮಧ್ಯದ ಖಾಲಿ ಕ್ವಾಟರ್ ಬಾಟಲಿಯಿಂದ ಚಂದು ರವರ ತಲೆಗೆ ಯದ್ವಾತದ್ವಾ ಹೊಡೆದು ಕಾರು ಚಾಲಕ ಕಾರು ಸಮೇತ ಇತರರೊಂದಿಗೆ ಉಪ್ಪಿನಂಗಡಿ ಕಡೆಗೆ ಪರಾರಿಯಾಗಿದ್ದಾರೆ.