ಬೆಂಗಳೂರು: ಮದುವೆ ಆಗುತ್ತೇನೆ ಎಂದು ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪ ಪೊಲೀಸ್ ಕಾನ್ಸ್ ಟೇಬಲ್ ವಿರುದ್ಧ ಕೇಳಿ ಬಂದಿದೆ.
ತನ್ನನ್ನು ಪೊಲೀಸ್ ಕಾನ್ಸ್ ಟೇಬಲ್ ಮದುವೆ ಆಗಲೇಬೇಕು ಎಂದು ಒತ್ತಾಯಿಸಿ ನ್ಯಾಯಕ್ಕಾಗಿ ಯುವತಿ ಬಸವನಗುಡಿ ಠಾಣೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಪೊಲೀಸ್ ಕಾನ್ಸ್ ಟೇಬಲ್ ಅನಿಲ್ ಕುಮಾರ್ ಮತ್ತು ಚಿತ್ರದುರ್ಗದ ಮೂಲದ ನಾಗವೇಣಿ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೇವಲ ಪ್ರೀತಿ ಮಾಡಿದ್ದಲ್ಲದೇ ಮದುವೆ ಆಗ್ತಿನಿ ಎಂದು ನಂಬಿಸಿ ದೈಹಿಕವಾಗಿ ಅನಿಲ್ ಕುಮಾರ್ ಬಳಸಿಕೊಂಡಿದ್ದಾರೆ. ಈಗ ಮದುವೆ ಆಗು ಎಂದರೆ ಆಗಲ್ಲ, ನನಗೆ ಬೇರೊಬ್ಬರ ಜೊತೆ ಎಂಗೇಜ್ಮೆಂಟ್ ಆಗಿದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅನಿಲ್ ವಿರುದ್ಧ ನಾಗವೇಣಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಅನಿಲ್ ವಿರುದ್ಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಕೋರ್ಟ್ ನಿಂದ ನಿರೀಕ್ಷಣ ಜಾಮೀನು ಪಡೆದು ಅನಿಲ್ ಕೆಲಸಕ್ಕೆ ಹಾಜರಾಗಿದ್ದ. ಈಗ ಅನಿಲ್ ಬಸವನಗುಡಿ ಪೊಲೀಸ್ ಠಾಣೆಯಲ್ಲೇ ಕೆಲಸ. ಮಾಡುತ್ತಿದ್ದಾರೆ. ಹೀಗಾಗಿ ಯುವತಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.