Saturday, April 20, 2024
spot_imgspot_img
spot_imgspot_img

ಉಪ್ಪಿನಂಗಡಿ: ನಿದ್ದೆಗೆಡಿಸಿದ ಸರಣಿ ಕಳ್ಳತನ; 4 ಮನೆಗಳಿಗೆ ಕನ್ನ ಹಾಕಿದ ಚೋರರು

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಉಪ್ಪಿನಂಗಡಿ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದ್ದು, 2 ಮನೆಗಳಲ್ಲಿ ಕಳ್ಳತನ ನಡೆಸಿದರೆ. ಮತ್ತೆರಡು ಮನೆಗಳಲ್ಲಿ ಏನೂ ಸಿಗದೆ ಕಳ್ಳರು ವಾಪಾಸಾಗಿರುವ ಘಟನೆ ಉಪ್ಪಿನಂಗಡಿಯ ಕೊಪ್ಪಳ ಎಂಬಲ್ಲಿ ನಡೆದಿದೆ. ಇಲ್ಲಿನ ಅಬ್ದುಲ್ ರಹಿಮಾನ್ ಎಂಬವರ ಮನೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು 200 ರೂಪಾಯಿ ನಗದು ಹಣವನ್ನು ದೋಚಿದ್ದು, ವಿನೋದಾ ಎಂಬವರ ಮನೆಯಲ್ಲಿ 600 ರೂಪಾಯಿ ದೋಚಿದ್ದಾರೆ.

ಕೈಸ್ ಎಂಬವರ ಮನೆಯ ಬಾಗಿಲು ಮುರಿಯಲು ಯತ್ನಿಸಿದರಾದರೂ ಮನೆ ಮಂದಿ ಎಚ್ಚರಗೊಂಡಾಗ ಕಳ್ಳರು ಓಡಿ ಪರಾರಿಯಾಗಿದ್ದಾರೆಂದು ತಿಳಿಸಲಾಗಿದೆ. ಇದೇ ಪರಿಸರದ ಕವಿತಾ ಎಂಬವರ ಮನೆಯ ಅಂಗಳಕ್ಕೆ ಕಳ್ಳರು ಬಂದಿದ್ದು, ಮನೆ ಮಂದಿ ತಮ್ಮನ್ನು ಗಮನಿಸಿದ್ದನ್ನು ಕಂಡು ಪರಾರಿಯಾಗಿದ್ದಾರೆಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ. ಗಾನಾ ಪಿ. ಕುಮಾರ್, ಉಪ್ಪಿನಂಗಡಿ ಎಸ್.ಐ. ಕುಮಾರ್ ಕಾಂಬ್ಳೆ, ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!