- Advertisement -
- Advertisement -
ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಷ್ಣುಮೂರ್ತಿ ಶಾಖೆ ಮಾಣಿಲ ವತಿಯಿಂದ ಇಂದು ಮಾಣಿಲ ಗ್ರಾಮದ ಪಕಳಕುಂಜದಿಂದ ಮುರುವದವರೆಗೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿದ್ದ ಸೊಪ್ಪು ಹುಲ್ಲು ಹಾಗೂ ರಸ್ತೆಗೆ ಬಾಗಿದ್ದ ರೆಂಬೆಗಳನ್ನು ಕಡಿದು ಸ್ವಚ್ಚಗೊಳಿಸಲಾಯಿತು.
ಈ ಸ್ವಚ್ಛತಾ ಅಭಿಯಾನದಲ್ಲಿ ಘಟಕದ ಕಾರ್ಯಕರ್ತರು & ಗ್ರಾಮಸ್ಥರು ಭಾಗಿಯಾಗಿ ಕಾರ್ಯವನ್ನು ಸುಗಮವಾಗಿಸಲು ಸಹಕರಿಸಿದರು.
ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲಾ ಕಾರ್ಯಕರ್ತರಿಗೆ , ಊಟೋಪಚಾರದಲ್ಲಿ ಸಹಕರಿಸಿದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾಣಿಲ ಇಲ್ಲಿನ ಆಡಳಿತ ಮಂಡಳಿಗೆ ಹಾಗೂ ಹುಲ್ಲು ತೆಗೆಯುವ ಯಂತ್ರದಲ್ಲಿ ಸಹಕರಿಸಿದ ಗೋವಿಂದರಾಜ ಬಟ್ಯಡ್ಕ, ರವಿ ಜಿ. ಬಟ್ಯಡ್ಕ ಹಾಗೂ ಅಜಿತ್ ಶಂಕರ್ ಪಳನೀರು ಇವರಿಗೆ ವಿಶ್ವಹಿಂದೂ ಪರಿಷತ್ ಭಜರಂಗದಳ ವಿಷ್ಣುಮೂರ್ತಿ ಶಾಖೆ ಮಾಣಿಲದ ಮುಖಂಡರು ಧನ್ಯವಾದಗಳನ್ನು ತಿಳಿಸಿದ್ದಾರೆ.
- Advertisement -