- Advertisement -
- Advertisement -



ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ ) ಚಂದಳಿಕೆ ವಿಟ್ಲ ಮತ್ತು ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ವಿಟ್ಲ ಇದರ ವತಿಯಿಂದ ಜರಗುವ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಅಧ್ಯಕ್ಷರಾದ ಶ್ರೀ ಶಂಕರ ಭಟ್ ಬದನಾಜೆ ಅವರು ಮಂಗಳಾ ಮಂಟಪ ಚಂದಳಿಕೆಯಲ್ಲಿ ಬಿಡುಗಡೆಗೊಳಿಸಿ ಕಾರ್ಯಧ್ಯಕ್ಷರಾದ ಶ್ರೀ ಕೃಷ್ಣಯ್ಯ ಕೆ ಅರಮನೆ ಶುಭಹಾರೈಸಿದರು.

ಕ್ಲಬ್ ನ ಗೌರವಾಧ್ಯಕ್ಷರಾದ ಗಂಗಾಧರ ಸಿ. ಅಧ್ಯಕ್ಷರು ಕರುಣಾಕರ ಗೌಡ ಎಂ. ಕಾರ್ಯದರ್ಶಿ ಚೇತನ್ ಕುಮಾರ್ ಕಲ್ಲಕಟ್ಟಾ. ಕೋಶಾಧಿಕಾರಿ ವಿಶ್ವನಾಥ ಎಂ. ಹಾಗೂ ಪದಾಧಿಕಾರಿಗಳಾದ ನರೇಂದ್ರ ಸಿ. ಜಗದೀಶ್ ಎಂ. ನಿತಿನ್ ಮುದೂರು. ಬೆಳಿಯಪ್ಪ ಎಂ. ಗೌರವ ಸಲಹೆಗಾರರುಗಳಾದ ಹರಿಗಣೇಶ ಸಿ. ಕೃಷ್ಣ ಮುದೂರು ಮತ್ತು ಸದಸ್ಯರು ಉಪಸ್ಥಿತರಿದ್ದರು.ತಾರೀಕು 27.08.2025. ಬುಧವಾರ ಮತ್ತು 28.08.2025 ಗುರುವಾರ ಎರಡು ದಿನ ವಿವಿಧ ಕಾರ್ಯಕ್ರಮಗಳೊಂದಿಗೆ ಮಂಗಳ ಮಂಟಪ ಚಂದಳಿಕೆಯಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
- Advertisement -








