Monday, May 6, 2024
spot_imgspot_img
spot_imgspot_img

ವಿಟ್ಲ: ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇದರ ವತಿಯಿಂದ 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

- Advertisement -G L Acharya panikkar
- Advertisement -
vtv vitla

ವಿಟ್ಲ: ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇದರ ವತಿಯಿಂದ 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಶಿಕ್ಷಣ ಇಲಾಖೆಯ ನಿವೃತ್ತ CRP ಶಿವರಾಮ್ ಭಟ್ ಉರಿಮಜಲು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಮತ್ತು ಯುವ ಜನತೆ ದೇಶ ಭಾಷೆಯ ಜೊತೆಗೆ ಸ್ವವಲಂಬನೆಯ ಬದುಕನ್ನ ಮೈಗೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರುಗಳಾದ ಜನಾರ್ದನ ಕಾರ್ಯಾಡಿ, ಪುರುಷೋತ್ತಮ ಮುಂಡ್ರಬೈಲು, ಅಧ್ಯಕ್ಷ ರಂಜಿತ್ ನೆಕ್ಕರೆ ಮತ್ತು ಸರ್ವಸದಸ್ಯರು, ಊರಿನ ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯುವಕಮಂಡಲದ ಸ್ಥಾಪಕ ಅಧ್ಯಕ್ಷ ಕಾರ್ತಿಕ್ ಕುಮಾರ್ ಶೆಟ್ಟಿ ಮೂಡೈಮಾರ್ ಸ್ವಾಗತಿಸಿ ವಂದಿಸಿದರು. ಆ ಬಳಿಕ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಸಿಹಿತಿಂಡಿ ನೀಡಿ ಸಂಭ್ರಮಿಸಲಾಯಿತು.

- Advertisement -

Related news

error: Content is protected !!