Monday, April 29, 2024
spot_imgspot_img
spot_imgspot_img

ವಿಟ್ಲ: (ಆ.28) ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಶತಸಮೃದ್ಧಿ ಶತಮಾನೋತ್ಸವದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ : ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಶತಸಮೃದ್ಧಿ ಶತಮಾನೋತ್ಸವದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ದಿನಾಂಕ 28.08.2023 ಸೋಮವಾರ ಬೆಳಿಗ್ಗೆ ಗಂಟೆ 10.30ಕ್ಕೆ ಅಳಿಕೆಯಲ್ಲಿ ನಡೆಯಲಿದೆ.

ನೂತನ ಕಟ್ಟಡ ಉದ್ಘಾಟನೆ ಹಾಗೂ ಸಭಾಧ್ಯಕ್ಷತೆಯನ್ನು ಕನಾ೯ಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿ., ಬೆಂಗಳೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿ., ಮಂಗಳೂರು ಇದರ ಅಧ್ಯಕ್ಷರು, ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ.), ಮಂಗಳೂರು ಇದರ ಮೆನೇಜಿಂಗ್ ಟ್ರಸ್ಟಿ, “ಸಹಕಾರ ರತ್ನ” ಎಂ.ಎನ್. ರಾಜೇಂದ್ರ ಕುಮಾರ್‌ ವಹಿಸಲಿದ್ದಾರೆ.

ದೀಪ ಪ್ರಜ್ವಲನೆಯನ್ನು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ‌ಇದರ ಅಧ್ಯಕ್ಷರು ಕೆ.ಎಸ್.ಕೃಷ್ಣ ಭಟ್ ಮಾಡಲಿದ್ದು, ಗೋದಾಮು ಉದ್ಘಾಟನೆಯನ್ನು ಸಂಸದರು, ಮಂಗಳೂರು ಲೋಕಸಭಾ ಕ್ಷೇತ್ರ ಹಾಗೂ ಬಿ.ಜೆ.ಪಿ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡಲಿದ್ದಾರೆ. ದಿ|ಮಡಿಯಾಲ ನಾರಾಯಣ ಭಟ್ ಸ್ಮಾರಕ ವಾಣಿಜ್ಯ ಸಂಕೀಣ೯ ಉದ್ಘಾಟನೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನಡೆಸಲಿದ್ದಾರೆ. ಭದ್ರತಾ ಕೋಶ ಉದ್ಘಾಟನೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾೖಕ್‌ ಯು. ಉಳಿಪ್ಪಾಡಿಗುತ್ತು ನಡೆಸಲಿದ್ದಾರೆ. ಗಣಕೀಕರಣ ಉದ್ಘಾಟನೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಸಂಜೀವ ಮಠಂದೂರು, ಆಡಳಿತ ಮಂಡಳಿಯ ಸಭಾಂಗಣ ಉದ್ಘಾಟನೆಯನ್ನು ದ.ಕ.ಜಿ.ಕೇ.ಸ. ಬ್ಯಾಂಕ್‌ ನಿ. ಮಂಗಳೂರು ನಿದೇ೯ಶಕರು ಟಿ.ಜಿ. ರಾಜಾರಾಮ ಭಟ್, ಮುಖ್ಯ ಅತಿಥಿಗಳಾಗಿ ದ.ಕ ಜಿ.ಸಹಕಾರಿ ಯೂನಿಯನ್ ಲಿ.,ಮಂಗಳೂರು ಇದರ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅಳಿಕೆ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಕೆ., ಸಹಕಾರ ಸಂಘಗಳ ಉಪನಿಬಂಧಕರು ಎಚ್.ಎನ್ ರಮೇಶ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸುಧೀರ್ ಕುಮಾರ್ ಜೆ., ಬಂಟ್ವಾಳ ಸಹಕಾರ ಅಭಿವೃದ್ದಿ ಅಧಿಕಾರಿ ಗೋಪಾಲ ಎನ್.ಜೆ ಭಾಗವಹಿಸಲಿದ್ದಾರೆ.

ಸಂಘದ ಮಾಜಿ ಅಧ್ಯಕ್ಷರುಗಳಾದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆ ನಿವೃತ್ತ ಪ್ರಾಂಶುಪಾಲ ಬಿ.ನಾರಾಯಣ ರಾವ್, ಕೆ.ಗೋವಿಂದ ಭಟ್ ಕೋಡಿಜಾಲು, ವಿ.ಗೋವಿಂದ ಭಟ್ ವಳಬೈಲು, ವಿ.ಈಶ್ವರ ಭಟ್ ವದ್ವ, ಮುಳಿಯ ನಾರಾಯಣ ಭಟ್, ಚಂದ್ರನಾಥ ಆಳ್ವ ಮಿತ್ತಳಿಕೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹಾಗೂ ಮಾಜಿ ನಿರ್ದೇಶಕರುಗಳಿಗೆ ಮತ್ತು ನಿವೃತ್ತ ಸಿಬ್ಬಂದಿಗಳನ್ನು ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!