ವಿಟ್ಲ: ಬೆಂಗಳೂರಿಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಮಲ್ಟಿ ಎಕ್ಸೆಲ್ ಬಸ್ಸು ಆರಂಭವಾಗಬೇಕೆಂಬುದು ವಿಟ್ಲ ಅಸುಪಾಸಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದು, ಅದರಂತೆ ಡಿ. 19ರಂದು ಮೊದಲ ಬಸ್ಸು ಸಂಚಾರ ಪ್ರಾರಂಭಗೊಂಡಿತು. ಹಲವು ಗಣ್ಯರ ಸಮ್ಮುಖದಲ್ಲಿ ಮಂಗಿಲಪದವು ಜಂಕ್ಷನ್’ನಲ್ಲಿ ವಿಟ್ಲದ ನಾಗರೀಕರ ಪರವಾಗಿ ಅದ್ದೂರಿ ಸ್ವಾಗತ ಕಾರ್ಯಕ್ರಮ ನಡೆಯಿತು.
ಈ ಬಸ್ಸು ಮಂಗಳೂರಿನಿಂದ ಹೊರಟು ವಿಟ್ಲ, ಪುತ್ತೂರು ಉಪ್ಪಿನಂಗಡಿ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿದೆ. ವಿಟ್ಲವಾಗಿ ಈ ಬಸ್ಸು ಸಂಚರಿಸಲು ಬಹುದಿನಗಳ ಬೇಡಿಕೆ ಇತ್ತು. ಶಾಸಕ ಸಂಜೀವ ಮಠಂದೂರು ಅವರ ಒತ್ತಾಯದ ಮೇರೆಗೆ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಹಾಗೂ ತಂಡ ಈ ಬಸ್ಸಿನ ವ್ಯವಸ್ಥೆ ಮಾಡಿರುತ್ತಾರೆ.
ಸ್ವಾಗತ ಕಾರ್ಯಕ್ರಮದಲ್ಲಿ ಉದ್ಯಮಿ ಸುಬ್ರಾಯ ಪೈ, ಮಾಣಿಲದ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ರಾಜೇಶ್ ಬಾಳೆಕಲ್ಲು, ದಯಾನಂದ ಶೆಟ್ಟಿ ಉಜಿರೆಮಾರು, ಕೃಷ್ಣಯ್ಯ ಕೆ ವಿಟ್ಲ ಅರಮನೆ, ಹರಿಪ್ರಸಾದ್ ಯಾದವ್, ಭಾರತೀಯ ಮಜ್ದೂರು ಸಂಘದ ಮುಖಂಡ ಶಾಂತರಾಮ ಶೆಟ್ಟಿ ವಿಟ್ಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.