ವಿಟ್ಲ: ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ, ಇದರ ವಲಯ ಸಮಿತಿ ರಚಿಸುವ ಮೊದಲ ವಲಯದ ಸಭೆ, ನವಚೇತನ ಯುವಕ ಮಂಡಲ ಸಾಲೆತ್ತೂರಿನಲ್ಲಿ ಜರುಗಿತು.
ಕೊಳ್ನಾಡು ಹಾಗೂ ಸಾಲೆತ್ತೂರು ಗ್ರಾಮಗಳ ಭಜನಾ ಮಂಡಳಿಗಳನ್ನು ಒಗ್ಗೂಡಿಸಿ ವಲಯ ಸಮಿತಿ ರಚಿಸಲಾಯಿತು. ವಲಯ ಸಮಿತಿಯ ಅಧ್ಯಕ್ಷರಾಗಿ ಶಂಕರ್ ಶೆಟ್ಟಿಗಾರ್ ಸಾಲೆತ್ತೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವೇಣುಗೋಪಾಲ್ ಆಚಾರ್ಯ ಮಂಕುಡೆ ಆಯ್ಕೆಯಾದರು. ಸಮಿತಿಗೆ ಇನ್ನುಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಲಯದ ಎರಡೂ ಗ್ರಾಮಗಳ ಎಲ್ಲಾ ಮಂಡಳಿಗಳ ಅಧ್ಯಕ್ಷ ಕಾರ್ಯದರ್ಶಿಗಳನ್ನು ವಲಯ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾದ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಇವರ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ದೈವಾಧೀನರಾದ ದೇವದಾಸ್ ಪ್ರಭು ಬಂಟ್ವಾಳ ಹಾಗೂ ಸದಾಶಿವ ದೇವಾಡಿಗ ಮಂಕುಡೆ ಇವರಿಗೆ ಈ ಸಭೆಯಲ್ಲಿ ಮೌನಾಚಾರಣೆಯೊಂದಿಗೆ ಶ್ರದ್ಧಾಂಜಲಿ ಕೊರಲಾಯಿತು. ಸಭೆಯಲ್ಲಿ ಪರಿಷತ್ತಿನ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶೀನಪ್ಪ ನಾಯ್ಕ ಮಂಗಿಲಪದವು, ಜತೆ ಕಾರ್ಯದರ್ಶಿಗಳಾದ ಜಯರಾಮ್ ನಾಯ್ಕ್ ಕುಂಟ್ರಕಲ, ರಾಜೇಶ್ ಆರ್.ಕೆ ವಿಟ್ಲ, ಸಂಚಾಲಕರೂ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ – ಬಂಟ್ವಾಳ ತಾಲೂಕು ಇದರ ಅಧ್ಯಕ್ಷರೂ ಆದ ದಿನೇಶ್ ಮಾಮೇಶ್ವರ ಮತ್ತು ಅನೇಕ ಭಜನಾ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.