Tuesday, July 21, 2026
spot_imgspot_img
spot_imgspot_img

ವಿಟ್ಲ: ಕಂಬಳಬೆಟ್ಟು ಶ್ರೀ ಸಿದ್ದಿವಿನಾಯಕ ಯುವಕ ಮಂಡಲ, ಜಯದುರ್ಗಾಪರಮೇಶ್ವರಿ ಭಜನಾ ಮಂಡಳಿ ಆಶ್ರಯದಲ್ಲಿ ʼಕುಣಿತ ಭಜನಾ ಸ್ಪರ್ಧೆ-2026ʼ

- Advertisement -
- Advertisement -

ವಿಟ್ಲ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಸಿದ್ದಿವಿನಾಯಕ ಯುವಕ ಮಂಡಲ(ರಿ.) ‘ಧರ್ಮನಗರ ಇವರ ನೇತೃತ್ವದಲ್ಲಿ ಶ್ರೀ ಜಯದುರ್ಗಾಪರಮೇಶ್ವರಿ ಭಜನಾ ಮಂಡಳಿ ಧರ್ಮನಗರದ ಸಹಯೋಗದೊಂದಿಗೆ ‘ಕುಣಿತ ಭಜನಾ ಸ್ಪರ್ಧೆ-2026’ ಜನವರಿ 4ರ ಆದಿತ್ಯವಾರದಂದು ಸಂಜೆ 3 ಗಂಟೆಯಿಂದ ಸಮಾಜ ಮಂದಿರ ಧರ್ಮನಗರ ಕಂಬಳಬೆಟ್ಟು ಇಲ್ಲಿ ನಡೆಯಲಿದೆ.

ವಿಜೇತರು ಪ್ರಥಮ ಬಹುಮಾನ-10,000, ದ್ವಿತೀಯ ಬಹುಮಾನ-7,000, ತೃತೀಯ ಬಹುಮಾನ-5,000, ಚತುರ್ಥ ಬಹುಮಾನ- 3,000 ರೂ. ಗಳನ್ನು ಬಹುಮಾನವಾಗಿ ಪಡೆದುಕೊಳ್ಳಲಿದ್ದಾರೆ.

ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ…

  • ಮೊದಲು ಹೆಸರು ನೋಂದಾಯಿಸಿದ ನಿರ್ದಿಷ್ಟ ತಂಡಗಳಿಗೆ ಅವಕಾಶ
  • ಒಂದು ತಂಡಕ್ಕೆ ಶ್ಲೋಕ ಭಜನೆ ಮಂಗಳ ಗೀತೆ ಸೇರಿ 15 ನಿಮಿಷ ಕಾಲಾವಕಾಶ
  • ಒಂದೇ ಸುತ್ತಿನಲ್ಲಿ ಸ್ಪರ್ಧೆಗಳಿರುತ್ತವೆ
  • ಒಂದು ತಂಡದಲ್ಲಿ ಗರಿಷ್ಠ 12 ಜನ ಸದಸ್ಯರಿಗೆ ಅವಕಾಶ
  • ಕುಣಿಯುವ ಸದಸ್ಯರೇ ಭಜನೆಯನ್ನು ಹೇಳಬೇಕು
  • ಹಿಮ್ಮೇಳದಲ್ಲಿ ಅಗತ್ಯವಿದ್ದರೆ ಸಂಗೀತವಾದ್ಯಗಳನ್ನು ಬಳಸಬಹುದು ಆದರೆ ಅಂಕಗಳಿರುವುದಿಲ್ಲ
  • ಭಾಗವಹಿಸುವ ತಂಡಕ್ಕೆ ಸಮವಸ್ತ್ರ ಕಡ್ಡಾಯ
  • ಒಬ್ಬ ಸದಸ್ಯನಿಗೆ ಒಂದು ಭಜನೆಯನ್ನು ಹಾಡಲು ಮಾತ್ರ ಅವಕಾಶ
  • ರಾಗ, ತಾಳ, ಟಮ್ಮಿ ಬಾರಿಸುವಿಕೆ, ಕುಣಿತದ ಸಂಯೊಂಜನೆ, ಗುಂಪು ಸ್ವರ, ತಂಡದ ಆಗಮನ, ಭಜನೆ ಪ್ರಾರಂಭ, ಮುಕ್ತಾಯ, ಹಾಡಿನ ಆಯ್ಕೆ ಈ ಅಂಶಗಳನ್ನು ಪರಿಗಣಿಸಿ ಅಂಕ ನೀಡಲಾಗುವುದು
  • ನೊಂದಣಿ ಶುಲ್ಕ ರೂ 200 ನೀಡಿ ತಮ್ಮ ತಂಡದ ಹೆಸರನ್ನು ನೊಂದಾಯಿಸಬೇಕು… ಕಾರ್ಯಕ್ರಮದ ದಿನ ಸಮಯಕ್ಕೆ ಮುಂಚಿತವಾಗಿ ( 3.30 pm )ತಂಡದ 12 ಜನರೂ ಆಗಮಿಸಿದಲ್ಲಿ ನೊಂದಣಿ ಶುಲ್ಕ ವಾಪಸು ನೀಡಲಾಗುವುದು..
  • ಭಾಗವಹಿಸಿದ ಎಲ್ಲಾ ಸ್ಪರ್ಧಾ ತಂಡಗಳಿಗೆ ಸರ್ಟಿಫಿಕೇಟ್ ನೀಡಲಾಗುವುದು
  • ರಾತ್ರಿ 8 ರಿಂದ ಊಟದ ವ್ಯವಸ್ಥೆ ಇರುತ್ತದೆ
  • ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಹೆಚ್ಚಿನ ವಿವರಗಳಗಾಗಿ 9740848160 ಅಥವಾ 9663692414 ಈ ನಂಬರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!