Tuesday, April 30, 2024
spot_imgspot_img
spot_imgspot_img

ವಿಟ್ಲ : ಪಕ್ಷೇತರ ಅಭ್ಯರ್ಥಿ ಆರುಣ್‌ ಕುಮಾರ್‌ ಪುತ್ತಿಲರ ಬೃಹತ್ ರೋಡ್ ಶೋ

- Advertisement -G L Acharya panikkar
- Advertisement -
vtv vitla

ವಿಟ್ಲ : ಪಕ್ಷೇತರ ಅಭ್ಯರ್ಥಿ ಆರುಣ್‌ ಕುಮಾರ್‌ ಪುತ್ತಿಲ ಅವರು ವಿಟ್ಲದಲ್ಲಿ ಬೃಹತ್ ರೋಡ್ ಶೋ ನಡೆಯಿತು.

ಮೊದಲಿಗೆ ಅರುಣ್ ಕುಮಾರ್ ಪುತ್ತಿಲ ಅವರು ವಿವಿಧ ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ವಿಟ್ಲದ ಜೈನ ಬಸದಿಯಿಂದ ಅಪಾರ ಕಾರ್ಯಕರ್ತರ ನೇತೃತ್ವದಲ್ಲಿ ರೋಡ್ ಶೋ ಹೊರಟು, ಮುಖ್ಯ ರಸ್ತೆಯಲ್ಲಿ ಸಂಚರಿಸಿ ಅರಮನೆಯ ಮೈಮೆ ಗದ್ದೆಯಲ್ಲಿ ಸಭೆ ನಡೆಯಿತು.

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಆರ್.ಎಸ್.ಎಸ್.ಹಿರಿಯರ, ಮಠಾಧೀಶರ, ಕಾರ್ಯಕರ್ತರ ಆಶಯದಂತೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಹಿಂದುತ್ವದ ಹೆಸರಿನಲ್ಲಿ ಸ್ಪರ್ಧೆಗೆ ಇಳಿದಿದ್ದೇನೆ ಎಂದ ಅವರು, ಸೌಮ್ಯ ಭಟ್, ಅಕ್ಷತಾ ಕೊಲೆ ಪ್ರಕರಣ, ಪ್ರವೀಣ್ ನೆಟ್ಟಾರು ಹತ್ಯೆ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ ಎಂದು ಸ್ಮರಿಸಿಕೊಂಡರು. ಅಧಿಕಾರಕ್ಕಾಗಿ ತಾನು ಸ್ಪರ್ಧೆಗೆ ಇಳಿದಿಲ್ಲ. ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ವಿರುದ್ಧ ಹೋರಾಟದ ಭಾಗವಾಗಿ ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಇದರ ಹೊರತಾಗಿ ಯಾವುದೇ ಪಕ್ಷಗಳ ವಿರುದ್ಧದ ಹೋರಾಟ ಇದಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!