Friday, April 26, 2024
spot_imgspot_img
spot_imgspot_img

ವಿಟ್ಲ: ಬೋಳಂತೂರು ನೆರೆಮನೆಯ ಹುಡುಗಿಯನ್ನು ಪ್ರೀತಿಸಿದ ಹುಡುಗನಿಗೆ ಹುಡುಗಿಯ ಚಿಕ್ಕಪ್ಪನಿಂದ ಕತ್ತಿಯಿಂದ ಹಲ್ಲೆ!

- Advertisement -G L Acharya panikkar
- Advertisement -

ವಿಟ್ಲ: ಬೋಳಂತೂರು ಗ್ರಾಮದ ಸುರಿಬೈಲು ಗಂಡಿ ಎಂಬಲ್ಲಿ ಯುವಕನೊಬ್ಬನು ಪಕ್ಕದ ಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಚಾರದಲ್ಲಿ ಕತ್ತಿಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಬೋಳಂತೂರು ಸುರಿಬೈಲು ನಿವಾಸಿ ಇರ್ಫಾನ್ (25)ಎಂಬಾತನು ಕಳೆದ 5 ವರ್ಷಗಳಿಂದ ತನ್ನ ನೆರೆಮನೆಯ ಅಬ್ದುಲ್ ರಹಿಮಾನ್ ಎಂಬವರ ಪುತ್ರಿ ಫಾತಿಮತ್ ಸಬುಹಾನ ಎಂಬ ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದು ಕಳೆದ 2 ತಿಂಗಳಿಂದ ಹುಡುಗಿಯ ಕುಟುಂಬದವರು ಮದುವೆಯ ಬಗ್ಗೆ ನಿರಾಕರಿಸಿದ್ದು,ಹುಡುಗಿಯ ಮೊಬೈಲನ್ನು ಸ್ವಿಚ್ ಆಪ್ ಮಾಡಿ ಸಂಪರ್ಕ ಕಡಿತ ಗೊಳಿಸಿದ್ದರು.

ನಿನ್ನೆ ರಾತ್ರಿ 10.30 ರ ವೇಳೆಗೆ ಹುಡುಗಿಯ ಮನೆಗೆ ಹೋಗಿ ಮಾತನಾಡಿ ವಾಪಸ್ ಬರುವಾಗ ಹುಡುಗಿಯ ಚಿಕ್ಕಪ್ಪ ಇಸುಬು ಎಂಬಾತನು ಇರ್ಫಾನ್ ನನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲ್ಲಿದ್ದ ಕತ್ತಿಯಿಂದ ಇರ್ಫಾನ್ ನ ತಲೆಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿರುತ್ತಾರೆ. ಈ ಸಮಯದಲ್ಲಿ ಇರ್ಫಾನ್ ನ ಮೈ ಮೇಲೆ ರಕ್ತವಾಗಿದ್ದು ತಪ್ಪಿಸಿಕೊಂಡು ಪ್ರಾಣ ಭಯದಿಂದ ತನ್ನ ಮನೆಯ ಕಡೆಗೆ ಹೋಡಿ ಹೋಗಿರುತ್ತಾನೆ.ನಂತರ ಇರ್ಫಾನ್ ನನ್ನು ಸಂಬಂಧಿಕರು ಖಾಸಗಿ ಆಸ್ಪತ್ರೆ ಗೆ ದಾಖಲಿಸಿರುತ್ತಾರೆ.ವಿಟ್ಲ ಠಾಣಾ ಪೊಲೀಸರು ತನಿಖೆ ನಡೆಸಿ ಕೇಸು ದಾಖಲಾಗಿರುತ್ತದೆ.

- Advertisement -

Related news

error: Content is protected !!