Thursday, April 18, 2024
spot_imgspot_img
spot_imgspot_img

ವಿಟ್ಲ: ಜಖಂಗೊಂಡ ಪ್ರಯಾಣಿಕರ ತಂಗುದಾಣ – ಸಮಸ್ಯೆಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಸಂತೆ ಮಾರುಕಟ್ಟೆ ಬಳಿ ಬಸ್ ತಂಗುದಾಣವನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ಪ್ರಯಾಣಿಕರ ತಂಗುದಾಣ ಸರಿಯಾಗಿಯೇ ಇತ್ತು. ಆದರೆ ಹಲವು ದಿನಗಳ ಹಿಂದೆ ಪಿಕ್ ಅಪ್ ವಾಹನವೊಂದು ಇದಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಪರಿಣಾಮ ಹಾಸಿದ ಛಾವಣಿ ಜಖಂಗೊಂಡಿದೆ. ರಸ್ತೆಯ ಒಳಪಕ್ಕ ಛಾವಣೆ ಬಾಗಿಕೊಂಡಿದ್ದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಎತ್ತರವಿದ್ದ ಛಾವಣೆ ಬಾಗಿಕೊಂಡಿರುವುದರಿಂದ ಬೈಕ್ ಸವಾರರಿಗೆ ತೊಂದರೆಯಾಗುತ್ತಿದೆ.

ಈಗಾಗಲೇ ಬೈಕ್ ಪ್ರಯಾಣಿಕರಿಗೆ ತಲೆಗೆ ತಾಗಿದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯ. ಪ್ರಯಾಣಿಕರ ತಂಗುದಾಣವನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂಬ ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕಾಗಿದೆ.

- Advertisement -

Related news

error: Content is protected !!