- Advertisement -
- Advertisement -
ವಿಟ್ಲ: ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅನಂತಾಡಿ ಗ್ರಾಮದ ವಡ್ಡೇಲು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿದ ವ್ಯಕ್ತಿಯನ್ನು ಕೃಷ್ಣಪ್ಪ ಗೌಡ ಎಂದು ಗುರುತಿಸಲಾಗಿದೆ.
ಏಕಾಏಕಿ ಕುಸಿದು ಬಿದ್ದ ಕೃಷ್ಣಪ್ಪ ಗೌಡರನ್ನು ನೋಡಿದ ಕೃಷ್ಣಪ್ಪ ಗೌಡ ಹೆಂಡತಿ ಮಗನಿಗೆ ಬಂದು ಹೇಳಿದ್ದಾರೆ. ಕುಸಿದು ಬೀಳಲು ಕಾರಣ ಏನು ಎಂಬುದುನ್ನು ಮನೆಯೆಲ್ಲಾ ಹುಡುಕಾಡಿದ ಕೃಷ್ಣಪ್ಪ ಗೌಡರ ಮಗನಿಗೆ ಶೌಚಾಲಯದಲ್ಲಿ ಕೀಟನಾಶಕದ ಬಾಟಲಿ ಖಾಲಿ ಮಾಡಿದ್ದು ಬೆಳಕಿಗೆ ಬಂದಿದೆ.
ಆಸ್ಪತ್ರೆಗೆ ರವಾನಿಸಿದಾಗ ವ್ಯಕ್ತಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ. ವ್ಯಕ್ತಿಗೆ ವಿಪರೀತ ಕುಡಿಯುವ ಚಟ ಇತ್ತೆಂಬುವುದು ತಿಳಿದುಬಂದಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -