- Advertisement -
- Advertisement -
ವಿಟ್ಲ: ಏಕಾಏಕಿ ಮನೆಗೆ ನುಗ್ಗಿದ ತಂಡವೊಂದು ಯುವಕನ ಮೇಲೆ ಗಂಭೀರವಾಗಿ ಹಲ್ಲೆಗೈದ ಘಟನೆ ವಿಟ್ಲದ ಚಂದಳಿಕೆಯ ಕುರುಂಬಳ ಎಂಬಲ್ಲಿ ನಡೆದಿದೆ. ಲೋಕನಾಥ್ ಜೋಗಿ ಎಂಬವರ ಮಗ ಹೃದಯ್ ಗಂಭೀರ ಗಾಯಗೊಂಡಿದ್ದಾರೆ.
ರಸ್ತೆಯ ವಿಚಾರವಾಗಿ ವಾಟ್ಸಾಪ್ನಲ್ಲಿ ಬರೆದು ಹಾಕಿದ್ದರು. ಈ ವಿಷಯವಾಗಿ ಜಗಳ ನಡೆದಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಮನೆಗೆ ಅಕ್ರಮ ಪ್ರವೇಶ ಮಾಡಿದ ರಾಮಣ್ಣ, ಪುನೀತ್, ತ್ಯಾಗರಾಜ್ ಹಾಗೂ ಇತರ ಎಂಟು ಮಂದಿ ಲೋಕನಾಥ್ ಜೋಗಿ ಮತ್ತು ಅವರ ಮಗ ಹೃದಯ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಗಾಯಗೊಂಡ ಯುವಕನ್ನು ವಿಟ್ಲದ ಆಸ್ಪತ್ರೆಗೆ ದಾಖಲಿಸಿದ್ದು ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
- Advertisement -