ವಿಟ್ಲ: ಕರ್ನಾಟಕ ರಾಜ್ಯ ‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದ ವತಿಯಿಂದ ಪುತ್ತೂರು ಎಸ್ಕೆಎಸ್ಸಸ್ಸೆಫ್ ಅಧೀನದ ತುರ್ತು ಸೇವಾ ತಂಡವಾದ ‘ವಿಖಾಯ ಸಮಿತಿ’ ಗೆ ವಿವಿಧ ಅಗತ್ಯ ಸಲಕರಣೆಗಳನ್ನು ಕುಂಬ್ರ ಕೆಐಸಿಯಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಬಿ.ಕೆ.ಅಬ್ದುಲ್ ಖಾದಿರ್ ಖಾಸಿಮಿ ಬಂಬ್ರಾಣ ಅವರು ಮಾತನಾಡಿ ಹನೀಫಿ ಉಲಮಾ ಸಂಘಟನೆಯು ಅಗತ್ಯವಾಗಿರುವ ವಿವಿಧ ಸಲಕರಣೆಗಳನ್ನು ವಿಖಾಯ ಸಮಿತಿಗಳಿಗೆ ವಿತರಿಸುವ ಯೋಜನೆಯನ್ನು ಹಾಕಿ ಕೊಂಡಿರುವುದು ಶ್ಲಾಘನೀಯ ಎಂದರು.
ಎಸ್ಕೆಎಸ್ಸಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಕಾರ್ಯಕ್ರಮವನ್ನು ಉದ್ಗಾಟಿಸಿದರು. ಎಸ್ಕೆಎಸ್ಸಸ್ಸೆಫ್ ದ.ಕ.ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಹನೀಫಿ ಉಲಮಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಹನೀಫಿ ಮರ್ದಾಳ, ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಜಾಬಿರ್ ಫೈಝಿ ಬನಾರಿ, ಇಸ್ಮಾಯಿಲ್ ಹನೀಫಿ ವಿಟ್ಲ, ಸ್ವಾದಿಕ್ ಹನೀಫಿ ಕುಂಬ್ರ, ಫಾರೂಕ್ ಸಂಟ್ಯಾರ್.
ಅಶ್ರಫ್ ಮುಕ್ವೆ, ಇಬ್ರಾಹಿಂ ಕಡವ, ಆಸಿಫ್ ಕಬಕ, ಮನ್ಸೂರ್ ಮೌಲವಿ, ಅಬ್ದುಲ್ ಸತ್ತಾರ್ ಕೌಸರಿ, ಯೂಸುಫ್ ಡ್ರೀಮ್ಸ್ , ಕೆ.ಎಂ.ಖಾದರ್ ಕೂರ್ನಡ್ಕ, ಶರೀಫ್ ಯು.ಪಿ. ಮೊದಲಾದವರು ಉಪಸ್ಥಿತರಿದ್ದರು. ‘ಸಮಸ್ತ’ ಹನೀಫಿ ಉಲಮಾ ಸಂಘಟನೆಯ ಅಧ್ಯಕ್ಷ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಕಮ್ಮಾಡಿ ಇಬ್ರಾಹಿಂ ಹಾಜಿ, ಬೊಳ್ಳಾಡಿ ಇಬ್ರಾಹಿಂ ಹಾಜಿ, ಅಬ್ದುರ್ರಹ್ಮಾನ್ ಹಾಜಿ ಬೈತಡ್ಕ ಮತ್ತು ಖತೀಜಮ್ಮ ಹಜ್ಜುಮ್ಮ ಅರ್ತಿಕೆರೆ ಮೊದಲಾದವರ ಹೆಸರಿನಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.