Friday, July 4, 2025
spot_imgspot_img
spot_imgspot_img

ವಿಟ್ಲ: (ಜ.12) ದಯಾ ಕ್ರಿಯೇಷನ್‌ ಬಾಯಾರು ಸಾಂಸ್ಕೃತಿಕ ಕಲಾ ತಂಡದ 4 ನೇ ವರ್ಷದ ಸಂಭ್ರಮೋತ್ಸವ ಕಾರ್ಯಕ್ರಮ

- Advertisement -
- Advertisement -

ತಂಡದ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಮುಳುಗು ತಜ್ಞ, ಸಮಾಜ ಸೇವಕ ಈಶ್ವರ್‌ ಮಲ್ಪೆಯವರಿಗೆ ಅಭಿನಂದನಾ ಕಾರ್ಯಕ್ರಮ

ವಿಟ್ಲ: ದಯಾ ಕ್ರಿಯೇಷನ್‌ ಬಾಯಾರು ಸಾಂಸ್ಕೃತಿಕ ಕಲಾ ತಂಡದ 4 ನೇ ವರ್ಷದ ಸಂಭ್ರಮೋತ್ಸವ ಕಾರ್ಯಕ್ರಮ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಇವರ ಮಾರ್ಗದರ್ಶನದಲ್ಲಿ ಜನವರಿ 12 ನೇ ಆದಿತ್ಯವಾರ ವಿಟ್ಲ ಕುಂಡಡ್ಕ ಸೊಸೈಟಿ ಹಾಲ್‌ನಲ್ಲಿ ನಡೆಯಲಿದೆ.

ಬೆಳಗ್ಗೆ ಗಂಟೆ ದಯಾ ಮೆಲೋಡಿಸ್‌ ಡ್ಯಾನ್ಸ್‌ ಗ್ರೂಪ್‌ ತಂಡದಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಶ್ರೀಧರ್‍ ಬಾಳೆಕಲ್ಲು ಅಧ್ಯಕ್ಷರು ಮಾಣಿಲ ಗ್ರಾಮ ಪಂಚಾಯತ್‌ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ದಿವ್ಯ ಉಪಸ್ಥಿತಿಯಲ್ಲಿರುವರು. ಕಾರ್ಯಕ್ರಮದಲ್ಲಿ ಶ್ವೇತಾ ಪೂಜಾರಿ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು, ಹಿರಿಯ ಸಾಹಿತಿ ತೋಡಿಕಾನ ಅಬ್ದುಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಳುಗು ತಜ್ಞ, ಸಮಾಜ ಸೇವಕ ಈಶ್ವರ್‌ ಮಲ್ಪೆಯವರನ್ನು ಅಭಿನಂದಿಸಲಾಗುವುದು.

- Advertisement -

Related news

error: Content is protected !!