Saturday, April 27, 2024
spot_imgspot_img
spot_imgspot_img

ಪುತ್ತೂರು: ನುಳಿಯಾಲು ತರವಾಡು ಶ್ರೀ ಧರ್ಮಚಾವಡಿಯಲ್ಲಿ ಗೊನೆಮುಹೂರ್ತ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla
vtv vitla

ನುಳಿಯಾಲು ತರವಾಡು ಶ್ರೀ ಧರ್ಮಚಾವಡಿಯಲ್ಲಿ ನುಳಿಯಾಳು ತರವಾಡು ಮನೆಯ ಸಮಸ್ತ ದೈವಗಳಿಗೆ 26.12.2021 ಆದಿತ್ಯವಾರ ಮತ್ತು 27.12.2021 ನೇ ಸೋಮವಾರ ಮಧ್ಯಾಹ್ನದ ತನಕ ಧರ್ಮನೇಮ ಸೇವೆ ನಡೆಯಲಿದೆ. ಈ ಹಿನ್ನಲೆ ಇಂದು ಗೊನೆಮುಹೂರ್ತ ಕಾರ್ಯಕ್ರಮ ನುಳಿಯಾಲು ತರವಾಡು ಶ್ರೀ ಧರ್ಮಚಾವಡಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತರವಾಡಿನ ಯಜಮಾನ ಜಗನ್ನಾಥ ರೈ, ಪುರುಷೋತ್ತಮ ಆರ್.ಶೆಟ್ಟಿ ನುಳಿಯಾಳು ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.

26- 12 -2021 ನೇ ಆದಿತ್ಯವಾರ ಪೂರ್ವಾಹ್ನ 8 ಗಂಟೆಗೆ ಗಣಹೋಮ, 9 ಗಂಟೆಗೆ ನಾಗತಂಬಿಲ, ಪೂರ್ವಾಹ್ನ 11.30ರಿಂದ ಶ್ರೀ ವೆಂಕಟರಮಣ ದೇವರಿಗೆ ಹರಿಸೇವೆ, ಪ್ರಸಾದ ವಿತರಣೆ, ಮಧ್ಯಾಹ್ನ 1.30 ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಾಟ್ಯವೈಭವ ನಡೆಯಲಿದೆ. ಸಾಯಂಕಾಲ 4.30ಕ್ಕೆ ದೈವಗಳ ಭಂಡಾರ ಇಳಿಯುವುದು, ಬಳಿಕ ರಾಜನ್ ದೈವ ಪಿಲಿಭೂತಕ್ಕೆ ನೇಮ, ಜುಮಾದಿ, ಕಲ್ಲುರ್ಟಿ, ಪಂಜುರ್ಲಿ ಮೂಕಾಂಬಿಕ ಗುಳಿಗ, ವರ್ಣಾರ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.

27.12.2021 ನೇ ಸೋಮವಾರ ಉಷಃ ಕಾಲದಲ್ಲಿ ರಕ್ತೇಶ್ವರಿ ದೈವದ ನೇಮ, ಪೂರ್ವಾಹ್ನ 9.30ಕ್ಕೆ ಧರ್ಮದೈವ ಬಿರ್ಣಾಳ್ವ ದೈವಕ್ಕೆ ನೇಮ ಬಳಿಕ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಎರಡೂ ದಿನವೂ ನಿರಂತರ ಅನ್ನದಾನ ಸೇವೆ ನಡೆಯಲಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!