- Advertisement -
- Advertisement -


ವಿಟ್ಲ: ಮಹತ್ತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಜ.14 ರಿಂದ 22ವರೆಗೆ ನಡೆಯಲಿದೆ.
ದಿನಾಂಕ: 19-1-2025ನೇ ಆದಿತ್ಯವಾರ ಬೆಳಿಗ್ಗೆ 9:30ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ ನಡೆದು ರಾತ್ರಿ 8:00ಕ್ಕೆ ನಡುದೀಪೋತ್ಸವ ಬಳಿಕ ತೆಪ್ಪೋತ್ಸವ ನಡೆಯಲಿದೆ.
ಸಂಜೆ ಗಂಟೆ 4:00ರಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ಸಾರಥ್ಯದ ” ಆರ್. ಕೆ ಸಾಂಸ್ಕೃತಿಕ ವೈಭವ 2025″ ಆರ್. ಕೆ ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ನಾಟ್ಯ ಮಯೂರಿ ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶನದಲ್ಲಿ ಯಕ್ಷಗಾನ “ದಶಾರಥಿ ದರ್ಶನ” ನಡೆಯಲಿದೆ. ಬಳಿಕ ರಾತ್ರಿ.8:30ರಿಂದ ಆರ್. ಕೆ ಚಿಣ್ಣರ ಮನೆ ಇದರ ವಿದ್ಯಾರ್ಥಿಗಳಿಂದ ” ನೃತ್ಯ – ಸಂಭ್ರಮ ನಡೆಯಲಿದೆ.
- Advertisement -