ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇಡ್ಕಿದು ಗ್ರಾಮ ಪಂಚಾಯತು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ, ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಕುಂಡಡ್ಕ, ಗ್ರಾಮ ವಿಕಾಸ ಸಮಿತಿ ಇಡ್ಕಿದು, ಅಮೃತ ಸಿಂಚನ ರೈತ ಒಕ್ಕೂಟ ಇವರ ಜಂಟಿ ಸಹಯೋಗದಲ್ಲಿ ನೇಗಿಲ ನೆನಪು ಭತ್ತದ ಗದ್ದೆ ನಾಟಿ ಕಾರ್ಯಕ್ರಮವು ದಿನಾಂಕ ಅಗಸ್ಟ್ 5,6 ಮತ್ತು 7 ರಂದು ನಡೆಯಲಿರುವುದು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಪುತ್ತೂರು ದಾಸ್ತಾವೇಜು ಬರಹಗಾರರು ಶ್ರೀ ಶೇಖರ ನಾರಾವಿ,
ಇದನ್ನೂ ಓದಿ: ಆಗುಂಬೆ ಘಾಟ್ನಲ್ಲಿ ಬ್ರೇಕ್ ಫೈಲ್ ಆಗಿ ಪ್ರಪಾತಕ್ಕೆ ಜಾರಿದ ಲಾರಿ
ಕೃಷಿ ಇಲಾಖೆ ಬಂಟ್ವಾಳ ಇದರ ಸಹಾಯಕ ನಿರ್ದೇಶಕ ಶ್ರೀ ಚೆನ್ನಕೇಶವ ಮೂರ್ತಿ,ರೈತ ಸಂಪರ್ಕ ಕೇಂದ್ರ ವಿಟ್ಲ ಇದರ ಸಹಾಯಕ ಕೃಷಿ ಅಧಿಕಾರಿ ಶ್ರೀ ಎಸ್ ಕೆ. ಸರಿಕ್ಕಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಈ ಕಾರ್ಯಕ್ರಮಗಳಿಗೆ ಗ್ರಾಮದ ರೈತರು, ಯುವ ಜನತೆ, ಸ್ವ-ಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.