- Advertisement -
- Advertisement -



ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ನವಗ್ರಹ ಸಹಿತ ಶನಿಶಾಂತಿ ಹೋಮವು ನ.16 ನೇ ಶನಿವಾರದಂದು ನಡೆಯಲಿದೆ.

ಬೆಳಿಗ್ಗೆ 8:30 ಕ್ಕೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಬಳಿಕ 9:30ಕ್ಕೆ ಸಕಲ ಗ್ರಹದೋಷ ಪರಿಹಾರಕ್ಕಾಗಿ ವಿಶೇಷ ನವಗ್ರಹ ಸಹಿತ ಶನಿಶಾಂತಿ ಹೋಮ ಆರಂಭವಾಗಲಿದೆ. 12:00ಕ್ಕೆ ಪೂರ್ಣಾಹುತಿ ನಡೆದು ಬಳಿಕ 12:30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -