- Advertisement -
- Advertisement -
ವಿಟ್ಲ: ಎಸ್.ವೈ.ಎಸ್ ಮತ್ತು ಎಸ್.ಕೆ.ಎಸ್.ಎಸ್.ಎಫ್ ಪರ್ತಿಪ್ಪಾಡಿ ಶಾಖೆ ಇದರ ಜಂಟಿ ಆಶ್ರಯದಲ್ಲಿ ಮಜ್ಲಿಸುನ್ನೂರ್ (ಆಧ್ಯಾತ್ಮಿಕ ಸಂಗಮ) ಫೆ.4 ರಂದು ರಾತ್ರಿ 8 ಕ್ಕೆ ಪರ್ತಿಪ್ಪಾಡಿ ಮಸೀದಿಯಲ್ಲಿ ನಡೆಯಲಿರುವುದು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ. ಎಂ. ಅಬ್ದುಲ್ ರಹ್ಮಾನ್ ಫೈಝಿ ಮುದರಿಸ್ ಪರ್ತಿಪ್ಪಾಡಿ ರವರು ವಹಿಸಲಿದ್ದಾರೆ. ಸೈಯ್ಯಿದ್ ಹಾಮಿದ್ ಕೋಯಮ್ಮ ತಂಙಳ್ ಅಲ್ ಬುಖಾರಿ,ಅಲ್ ಜಲಾಲಿ (ಚೆರ್ಮಾನ್ ದಾರುಲ್ ಹಂದ್ ಶರಿಯತ್ ಕಾಲೇಜು, ಹೊಸಂಗಡಿ) ಯವರ ನೇತೃತ್ವದಲ್ಲಿ ನಡೆಯಲಿದೆ.
ಅಲ್ಲದೇ ಇನ್ನಿತರ ಉಲಮಾ ಉಮರಾ ನೇತಾರರೂ ಭಾಗವಹಿಸಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕವಾದ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪರ್ತಿಪ್ಪಾಡಿ ಮಸೀದಿ ಎಸ್.ವೈ.ಎಸ್ ಮತ್ತು ಎಸ್.ಕೆ.ಎಸ್.ಎಸ್.ಎಫ್ ಪರ್ತಿಪ್ಪಾಡಿ ಶಾಖೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -