ವಿಟ್ಲ: ಲಾಕ್ಡೌನ್ನಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ದುಡಿಮೆಯಿಲ್ಲದೆ ಜನರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಹಲವಾರು ಮಂದಿ ಬಡವರ ಹಾಗೂ ಸಂಕಷ್ಟಕ್ಕೆ ಸಿಲುಕಿದ ಮಂದಿಗೆ ಸಹಾಯಹಸ್ತ ನೀಡುವುದರ ಮೂಲಕ ಜನರ ಕಷ್ಟಕ್ಕೆ ನೆರವಾಗುತ್ತಿದ್ದಾರೆ.
ಅದೇ ರೀತಿಯಲ್ಲಿ ಯಕ್ಷಗಾನ ಕಲಾವಿದರ ಕಷ್ಟಗಳನ್ನು ಅರಿತು ಅವರಿಗೆ ನೆರವಾದ ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು ಇವರ ವತಿಯಿಂದ ಕಳೆದ ವರ್ಷವು ಸಾವಿರಾರು ಕಲಾವಿದರಿಗೆ ಕಿಟ್ ವಿತರಿಸುವ ಮೂಲಕ ಕಲಾವಿದರ ಹಸಿವು ನಿಗಿಸುವಲ್ಲಿ ನೆರವಾಗಿದ್ದಾರೆ. ಈ ವರ್ಷವು ಹಲವಾರು ಕಲಾವಿದರಿಗೆ ಕಿಟ್ ನೀಡುವುದರ ಮೂಲಕ ನೆರವಾಗುತ್ತಿದ್ದಾರೆ.
ಇಂದು ವಿಟ್ಲದಲ್ಲಿ ಹತ್ತಾರು ಕಲಾವಿದರಿಗೆ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ಉಪಸ್ಧಿತಿಯಲ್ಲಿ ಹಲವಾರು ಕಲಾವಿದರಿಗೆ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಅಧ್ಯಕ್ಷರಾದ ರಾಧಕೃಷ್ಣ ಚೆಲಡ್ಕ, ಗೌರವಧ್ಯಕ್ಷರಾದ ಕೃಷ್ಣಯ್ಯ ಅರಮನೆ, ಪ್ರಧಾನ ಕಾರ್ಯದರ್ಶಿಯಾದ ಪೂವಪ್ಪ ಮಾಸ್ಟರ್, ಸದಸ್ಯರಾದ ಸಂಜೀವ ಪೂಜಾರಿ, ಸಂಚಾಲಕರಾದ ದೇವಿಪ್ರಸಾದ್ ಶೆಟ್ಟಿ ಬೆಂಞಂತ್ತಿಮಾರ್, ಕಲಾವಿದ ಸುಬ್ರಾಯ ಹೊಳ್ಳ ಉಪಸ್ಧಿತರಿದ್ದರು.