Wednesday, April 24, 2024
spot_imgspot_img
spot_imgspot_img

ವಿಟ್ಲ: ಸಿಡಿಲು ಬಡಿದು ಹಾನಿಯಾಗಿದ್ದ ಮನೆಗೆ ಶಾಸಕರಿಂದ ಪರಿಹಾರ ಧನ ವಿತರಣೆ!

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಮೂಡ್ನೂರು ಗ್ರಾಮದ ಪೈಸಾರಿ ಎಂಬಲ್ಲಿನ ನಿವಾಸಿ ವಾಸುದೇವ ನಾಯಕ್‌ರವರ ವಾಸದ ಮನೆ ಪ್ರಾಕೃತಿಕ ವಿಕೋಪದಿಂದಾಗಿ ಹಾನಿಯಾಗಿದ್ದು, ನಷ್ಟ ಉಂಟಾಗಿತ್ತು. ಇದರ ಹಿನ್ನಲೆ, ಪರಿಹಾರದ ಚೆಕ್‌ ನ್ನು ವಿತರಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಚೆಕ್ ನೀಡಿದರು.

ಶಾಸಕರು ಸಂಜೀವ ಮಠಂದೂರು ಹಾಗೂ ಪುತ್ತೂರು ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಗ್ರಾಂ ಪಂ ಅಧ್ಯಕ್ಷರಾದ ಜಯ ಪ್ರಕಾಶ್ ನಾಯಕ್, ಗ್ರಾಂ ಪಂ ಸದಸ್ಯರಾದ ಪುನೀತ್ ಮಾಡತ್ತಾರ್, ಮಹಾಬಲೇಶ್ವರ ಭಟ್, ಪ್ರೇಮಲತಾ, ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದಯಾನಂದ ಉಜಿರೆಮಾರ್, ಸದಸ್ಯರಾದ ತೀರ್ಥರಾಮ ಗೌಡ, ಶಕ್ತಿ ಕೇಂದ್ರ ಪ್ರಮುಖರಾದ ಗೋವಿಂದರಾಜ್ ಭಟ್, ಮನೆಗಾರರಾದ ದಿವಾಕರ ಹಾಗೂ ಗ್ರಾಮ ಕರಣಿಕ ಕರಿಬಸಪ್ಪ ಉಪಸ್ಧಿತರಿದ್ದರು.

- Advertisement -

Related news

error: Content is protected !!