- Advertisement -
- Advertisement -
ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಪೂಜಾ ಸೇವೆಗಳು ಆರಂಭವಾಗಲಿದೆ. ಸರಕಾರದ ಆದೇಶ ಬಂದ ಮೇಲೆ ಅನ್ನದಾನ ನಡೆಯುವುದು ಎಂದು ದೇವಸ್ಥಾನದ ಆಡಳಿತ ವರ್ಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ 19 ಲಾಕ್ ಡೌನ್ ನಂತರ ಎಲ್ಲಾ ದೇವಾಲಯಗಳಲ್ಲಿ ಪೂಜೆ ಪುರಸ್ಕಾರವನ್ನು ಮಾಡದಿರುವಂತೆ ಸರಕಾರ ಆದೇಶ ಹೊರಡಿಸಿತ್ತು.ಇದೀಗ ಕೆಲವು ದಿನಗಳ ಹಿಂದೆ ಸರಕಾರದ ಆದೇಶದಂತೆ ದೇವಾಲಯಗಳಲ್ಲಿ ಪೂಜೆ ಸೇವೆಗಳನ್ನು ಮಾಡಲು ನೀಡಲಾಗಿದ್ದು,ಇದರಂತೆ ಇತಿಹಾಸ ಪ್ರಸಿದ್ಧ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಪೂಜಾ ಸೇವೆಗಳನ್ನು ಮಾಡಲು ಅವಕಾಶವಿದೆ ಎಂದು ದೇವಸ್ಥಾನದ ಆಡಳಿತ ವರ್ಗ ಮಾಹಿತಿ ನೀಡಿರುತ್ತಾರೆ.ಎಲ್ಲಾ ಸೇವೆಗಳಿಗೂ ಅವಕಾಶವಿದೆ ಎಂದು ದೇವಸ್ಥಾನದ ಅಡಳಿತ ಮಂಡಳಿ ತಿಳಿಸಿರುತ್ತಾರೆ.
- Advertisement -