- Advertisement -
- Advertisement -
ಸುಳ್ಯ: ವ್ಯಾಪಾರಕ್ಕೆ ಹೋಗಿದ್ದ ಜಯನಗರ ಮೂಲದ ಯುವಕನ ಕೈಯಿಂದ ಅಪರಿಚಿತರು ತಡರಾತ್ರಿ ವೇಳೆಗೆ ಮೊಬೈಲ್ ಹಣ ಕದ್ದೊಯ್ಯ ಘಟನೆ ಹಾಸನದಲ್ಲಿ ನಡೆದಿದೆ.
ಸುಳ್ಯ ಜಯನಗರ ನಿವಾಸಿ ಪ್ರದೀಪ್ ಎಂಬ ಯುವಕ ಹಾಸನದಲ್ಲಿ ಮಸಾಲೆ ಪದಾರ್ಥಗಳ ಲೈನ್ ಸೇಲ್ ಗೆಂದು ಹೋಗಿದ್ದ, ಸೋಮವಾರ ರಾತ್ರಿ ಒಂದು ಗಂಟೆಯ ವೇಳೆಗೆ ಬಸ್ಸಿನಿಂದ ಇಳಿದು ರೂಮಿಗೆ ಹೋಗುತ್ತಿದ್ದ ಸಂದರ್ಭ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಚೂರಿ ತೋರಿಸಿ ಆತನ ಬಳಿಯಿದ್ದ ಸುಮಾರು 20 ಸಾವಿರ ರೂಪಾಯಿ, ಮೊಬೈಲ್ ಫೋನ್ ಹಾಗೂ ಅವರ ಕೈಯಲ್ಲಿದ್ದ 300 ರೂಪಾಯಿಗಳನ್ನು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಡೆದ ಘಟನೆಯನ್ನು ಆತ ದೂರವಾಣಿ ಮೂಲಕ ಸುಳ್ಯದಲ್ಲಿರುವ ಮಾಲಕರಿಗೆ ತಿಳಿಸಿದ್ದು, ಪೊಲೀಸರಿಗೆ ಮಾಹಿತಿ ನೀಡುವಂತೆ ಮಾಲಕರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
- Advertisement -