- Advertisement -
- Advertisement -
ವಿಟ್ಲ ತಾಲೂಕು ಹಿಂದೂ ಜಾಗರಣ ವೇದಿಕೆಯಿಂದ ಖಂಡನೆ..!


ವಿಟ್ಲ: ವಿಟ್ಲ ಜೈನ ಬಸದಿ ಮುಂಗಾದಲ್ಲಿನ ಸರ್ಕಾರಿ ಪಶು ಚಿಕಿತ್ಸಾಲಯ ವಠಾರದಲ್ಲಿ ಹಾದುಹೋಗುವ ತೀರಾ ಇಕ್ಕಟ್ಟಾದ ರಸ್ತೆಗೆ ಕಾಂಕ್ರೀಟೀಕರಣ ಮಾಡಲು ಆರು ಲಕ್ಷ ಅನುದಾನ ಮಂಜೂರಾಗಿದೆ. ಇಂದು ಬೆಳಗ್ಗೆ ರಸ್ತೆ ಅಭಿವೃದ್ಧಿಯ ನೆಪದಲ್ಲಿ ಪರಿಸರದ ವ್ಯಕ್ತಿಗಳ ಸಮ್ಮುಖದಲ್ಲಿ ಸ್ಥಳಕ್ಕೆ ಬಂದ ಜೆಸಿಬಿ ವಾಹನ ಪಶು ಚಿಕಿತ್ಸಾಲಯದ ಆವರಣ ಗೋಡೆಯನ್ನು ಕೆಡವಿ ಧ್ವಂಸ ಮಾಡಿದೆ ಎಂದು ಪ.ಪಂ. ಮುಖ್ಯಾಧಿಕಾರಿಗೆ ವೈದ್ಯರು ದೂರು ನೀಡಿದ್ದಾರೆ.
ಇದೀಗ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ಈ ಕೃತ್ಯಕ್ಕೆ ಖಂಡನೆ ನೀಡಿದ್ದಾರೆ. ಯಾವುದೇ ಸರಕಾರಿ ಅಧೀನದಲ್ಲಿರುವ ವಸ್ತುಗಳಾಗಲಿ ಅದನ್ನು ಬಲವಂತವಾಗಿ ಮುಟ್ಟುವ ಅಧಿಕಾರ ಯಾರಿಗೂ ಇಲ್ಲ. ತಕ್ಷಣವೇ ಅದನ್ನು ಪಂಚಾಯತ್ ಮತ್ತು ಪೊಲೀಸ್ ಇಲಾಖೆಯ ಮೂಲಕ ಇತ್ಯರ್ತಗೊಳಿಸಿ ಮೊದಲಿನಂತೆ ಕಟ್ಟಿಕೊಡಬೇಕು. ಇಲ್ಲದಿದ್ದರೆ ಅವರ ಮೇಲೆ ನಿರ್ದಾಕ್ಷಿಣವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -