- Advertisement -
- Advertisement -



ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಇಂದಿನ ಕಾರ್ಯಕ್ರಮ, ದಿನಾಂಕ 21-01-2026 ಬುಧವಾರದಂದು ಬೆಳಿಗ್ಗೆ ಗಂಟೆ 9.30 ಕ್ಕೆ ದರ್ಶನ ಬಲಿ, ರಾಜಂಗಣದ ಬಟ್ಟಲು ಕಾಣಿಕೆ , ಪ್ರಸಾದ ವಿತರಣೆ , ಸಂಜೆ ಗಂಟೆ 4.30 ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನ . ರಾತ್ರಿ ಗಂಟೆ 9 ಕ್ಕೆ ಮಹಾ ರಥೋತ್ಸವ, ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.
ಸಂಜೆ ಗಂಟೆ 4.30 ರಿಂದ ಮಕ್ಕಳ ತಂಡ ಉರಿಮಜಲು ಇವರಿಂದ ”ಸ್ವರ ತರಂಗ” (ಸುಗಮ ಸಂಗೀತ) ಭರತನಾಟ್ಯ ಏಕವ್ಯಕ್ತಿ, ರಥೋತ್ಸವದ ಬಳಿಕ ವಿಟ್ಲ ಸರ್ಕಾರಿ ಮಾದರಿ ಶಾಲಾ ವಠಾರ ದಲ್ಲಿ ಬಪ್ಪನಾಡು ಮೇಳದವರಿಂದ ಯಕ್ಷಗಾನ “ಬನತ ಬೆಮ್ಮೆರ್” ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿರುವುದು.
- Advertisement -








