ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿ. ಇಲ್ಲಿ ಕಾರ್ಯನಿರ್ವಹಿಸಿ 30-04-2021 ರಂದು ವಯೋನಿವೃತ್ತರಾದ ಮೋಹನ್ ರಾವ್.ವಿ ಇವರು 35 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ ಇವರಿಗೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಜಗನ್ನಾಥ ಸಾಲಿಯಾನ್. ಹೆಚ್ ವಹಿಸಿದ್ದರು. ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮೋಹನ್ ಕೆ.ಎಸ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಹರೀಶ್ ನಾಯಕ್.ಎಂ, ಮನೋರಂಜನ್.ಕೆ.ಆರ್, ಉದಯ ಕುಮಾರ್.ಎ, ಕೃಷ್ಣ. ಕೆ, ದಿವಾಕರ. ವಿ, ದಯಾನಂದ ಆಳ್ವ, ಸುಂದರ.ಡಿ, ವಿಶ್ವನಾಥ.ಎಂ, ಗೋವರ್ಧನ್ ಕುಮಾರ್, ಬಾಲಕೃಷ್ಣ.ಪಿ.ಎಸ್, ಜಯಂತಿ ಹೆಚ್ ರಾವ್, ಶುಭಲಕ್ಷ್ಮಿ ಇವರು ಉಪಸ್ಥಿತರಿದ್ದರು.
ಶ್ರೀನಿಧಿ ವಿ ಕುಡ್ವ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮುಖ್ಯ ಕಾರ್ಯನಿರ್ವಾಹಕರಾದ ಕೃಷ್ಣ ಮುರಳಿ ಶ್ಯಾಮ್.ಕೆ ಇವರು ಸ್ವಾಗತಿಸಿದರು. ಉಪಾಧ್ಯಕ್ಷ ಶ್ರೀ ಮೋಹನ್ ಕೆ.ಎಸ್. ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶ್ವನಾಥ. ಎಂ ಧನ್ಯವಾದ ಸಮರ್ಪಿಸಿದರು. ಮಹೇಶ್ ಕುಮಾರ್ ಇವರು ಕಾರ್ಯಕ್ರಮ ನಿರೂಪಿಸಿದರು.