ವಿಟ್ಲ: ವಿಠ್ಠಲ ಎಜುಕೇಶನ್ ಸೊಸೈಟಿಯ ಆಶ್ರಯದಲ್ಲಿ ನಡೆದ ವಿಶೇಷ ಬೇಸಿಗೆ ತರಬೇತಿ ಶಿಬಿರದ ಫಿಟ್ನೆಸ್, ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್ ಹಾಗೂ ಧ್ಯಾನ ತರಬೇತಿಯ ಸಮಾರೋಪವು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿಠಲ ಎಜುಕೇಶನ್ ಸೊಸೈಟಿಯ ಸದಸ್ಯ ಭವಾನಿ ರೈ ಕೊಲ್ಯ ವಹಿಸಿದ್ದರು. ಉಪ ಪ್ರಾಂಶುಪಾಲ ಕಿರಣ್ ಕುಮಾರ್, ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಸುಧೇಶ್ ಭಂಡಾರಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ ಗೌಡ ನಿರೂಪಿಸಿ ವಂದಿಸಿದರು ಉಪನ್ಯಾಸಕರಾದ ಮಾಧವ ವಿ ಎಸ್, ಮುಕ್ತಶ್ರೀ ಸಹಕರಿಸಿ, ಉಪನ್ಯಾಸಕರಾದ ಪ್ರಕಾಶ್ ನಾಯಕ್ ಹಾಗೂ ಜಲಜಾಕ್ಷಿಯವರು ಶಿಬಿರಾರ್ಥಿಗಳಿಗೆ ಲಘು ಉಪಹಾರ ವ್ಯವಸ್ಥೆಗೊಳಿಸಿದರು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಟೀ ಶರ್ಟ್ಗಳನ್ನು ನೀಡಲಾಯಿತು. ತರಬೇತುದಾರರಾಗಿ ಶಿಶಿರ್ ಹಾಗೂ ಸುಬ್ರಮಣ್ಯ ಸಹಕರಿಸಿದರು.