ವಿಟ್ಲ: ವಿಠಲ ಎಜುಕೇಶನ್ ಸೋಸೈಟಿ (ರಿ.) ವಿಟ್ಲ ವಿಠಲ ಪದವಿಪೂರ್ವ ಕಾಲೇಜು ,ವಿಠಲ ಪ್ರೌಢ ಶಾಲೆ, ಮತ್ತು ವಿಠಲ ಸುಪ್ರಜಿತ್ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ವಿಟ್ಲ ಇದರ ವಾರ್ಷಿಕೋತ್ಸವವು ಡಿ.1 ಮತ್ತು 2 ರಂದು “ಸುವರ್ಣ ರಂಗ ಮಂದಿರ” ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇಲ್ಲಿ ನಡೆಯಲಿದೆ.
ಕಾಲೇಜು ವಿಭಾಗದ ವಾರ್ಷಿಕೋತ್ಸವವು ಡಿ.1 ರಂದು ಶುಕ್ರವಾರ ಬೆಳಿಗ್ಗೆ 9:3೦ ಕ್ಕೆ ನಡೆಯಲಿದೆ. ಧ್ವಜಾರೋಹಣ ಮತ್ತು ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲ ಎಜುಕೇಶನ್ ಸೊಸೈಟಿ ,ವಿಟ್ಲಇದರ ಗೌರವಾಧ್ಯಕ್ಷ ಬಂಗಾರು ಅರಸರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಉಚ್ಛ ನ್ಯಾಯಾಲಯ , ಬೆಂಗಳೂರು ಇಲ್ಲಿನ ಹಿರಿಯ ವಕೀಲ ಅರುಣ್ ಶ್ಯಾಮ್ ಒ. ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಪಿಯುಸಿ ವಿಭಾಗದ ದತ್ತಿನಿಧಿ ಬಹುಮಾನ ವಿತರಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಪಿಯುಸಿ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ಡಿ. 2 ಶನಿವಾರ ಬೆಳಿಗ್ಗೆ 9:3೦ ಕ್ಕೆ ನಡೆಯಲಿದೆ. ಧ್ವಜಾರೋಹಣ ಮತ್ತು ಸಭಾಕಾರ್ಯಕ್ರಮದಲ್ಲಿ ವಿಠಲ ಎಜುಕೇಶನ್ ಸೊಸೈಟಿ ,ವಿಟ್ಲ ಇದರ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಖ್ಯ ಅತಿಥಿಯಾಗಿ M.sc, PGDCA, MBA, PHD ಪ್ರೊಫೆಸರ್, ಭೌತಶಾಸ್ತ್ರ ವಿಭಾಗ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ವಾಮಂಜೂರು, ಮಂಗಳೂರು ಇವರು ವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಬಹುಮಾನ ವಿತರಣೆ ದತ್ತಿನಿಧಿ ಬಹುಮಾನ ವಿತರಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.