ವಿಟ್ಲ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಮತ್ತು ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ವಿಟ್ಲ ಇದರ ಸಭೆಯು ನ.13 ರಂದು ಮಂಗಳಾ ಮಂಟಪದಲ್ಲಿ ಜರಗಿತು.
ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷರಾಗಿ ಶಂಕರ ಭಟ್ ಬದನಾಜೆ ಮತ್ತು ಕೃಷ್ಣಯ್ಯ ಕೆ ವಿಟ್ಲ ಅರಮನೆ, ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರಾಗಿ ಜಯರಾಮ ಪರನೀರು ನಿಡ್ಯ, ಉಪಾಧ್ಯಕ್ಷರಾಗಿ ಬಿ.ಕೆ ಬಾಬು, ಕೃಷ್ಣ ಮುದೂರು, ಸಂಜೀವ ಪೂಜಾರಿ ಭಾರತ್ ಶಾಮಿಯಾನ, ವಿಟ್ಲ ಸೇಸಪ್ಪ ಆಚಾರ್ಯ ಕೈಂತಿಲ, ಕಾರ್ಯದರ್ಶಿಯಾಗಿ ವಿಶ್ವನಾಥ ಎ., ಜತೆ ಕಾರ್ಯದರ್ಶಿ ಜಗದೀಶ ಯಂ. ಆಯ್ಕೆಯಾದರು.
ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾಗಿ ಗಂಗಾಧರ ಸಿ, ಉಪಾಧ್ಯಕ್ಷರಾಗಿ ಲೋಹಿತ್ ಯಂ. ಮತ್ತು ನವೀನ ವಿ.ಆರ್, ಕೋಶಾಧಿಕಾರಿ ನರೇಂದ್ರ ಸಿ, ಜತೆ ಕೋಶಾಧಿಕಾರಿ ಅವಿನಾಶ್ ಸಿ, ಕಾರ್ಯದರ್ಶಿ ಲೋಕೇಶ್.ವಿ, ಜತೆ ಕಾರ್ಯದರ್ಶಿ ದೀಕ್ಷಿತ್ ಯಂ ಮತ್ತು ಸಂತೋಷ್ ಸಿ ಯವರನ್ನು ಆಯ್ಕೆ ಮಾಡಲಾಯಿತು.
ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ದಿನಾಂಕ 19/9/23 ನೇ ಮಂಗಳವಾರದಿಂದ 22/9/23 ನೇ ಶುಕ್ರವಾರದ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಗಣಪತಿಗೆ ಮೂಡಪ್ಪ ಸೇವೆ ಮತ್ತು 108 ಕಾಯಿಗಳ ಗಣಪತಿಹೋಮ ಹಾಗೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ವಿಜೃಂಭಣೆಯಿಂದ ಜರಗಿಸುವುದಾಗಿ ತೀರ್ಮಾನಿಸಲಾಯಿತು.