ವಿಟ್ಲ: ದ.ಕ ಗ್ಯಾರೇಜ್ ಮ್ಹಾಲಕರ ಸಂಘ(ರಿ) ಮಂಗಳೂರು, ವಿಟ್ಲ ವಲಯ ಇದರ ಮಹಾಸಭೆ ಮತ್ತು ಪದಗ್ರಹಣ ಕಾರ್ಯಕ್ರಮವು ಆ.27ರಂದು ಬೆಳಿಗ್ಗೆ 10ಗಂಟೆಗೆ ಭಾರತ್ ಆಡಿಟೋರಿಯಂ ಚಂದಳಿಕೆ ವಿಟ್ಲದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಖ್ಯಾತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ನೆರವೇರಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ದ.ಕ ಗ್ಯಾರೇಜ್ ಮ್ಹಾಲಕರ ಸಂಘ, ವಿಟ್ಲ ವಲಯದ ಅಧ್ಯಕ್ಷ ಬಿ.ಕೆ ಬಾಬು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ದ.ಕ ಗ್ಯಾರೇಜ್ ಮ್ಹಾಲಕರ ಸಂಘ ಮಂಗಳೂರು ಚೇರ್ ಮ್ಯಾನ್ ಪುಂಡಲೀಕ ಸುವರ್ಣ, ದ.ಕ ಗ್ಯಾರೇಜ್ ಮ್ಹಾಲಕ ಸೌಹಾರ್ದಾ ಸಹಕಾರಿ ಸಂಘ(ನಿ) ಮಂಗಳೂರು ಅಧ್ಯಕ್ಷರು ಜನಾರ್ಧನ ಅತ್ತಾವರ, ದ.ಕ ಗ್ಯಾರೇಜ್ ಮ್ಹಾಲಕರ ಸಂಘ ಮಂಗಳೂರು ಅಧ್ಯಕ್ಷ ಕಿಶೋರ್ ಕೇಶವ, ದೇಂಲತಬೆಟ್ಟು ಚರ್ಚ್ ನ ಧರ್ಮಗುರು ಹಾಗೂ ಸೈಂಟ್ ರೀಟಾ ಆಂಗ್ಲಮಾಧ್ಯಮ ಶಾಲೆ ವಿಟ್ಲದ ಪ್ರಿನ್ಸಿಪಾಲ್ ಸುನೀಲ್ ಪ್ರವೀಣ್ ಪಿಂಟೋ, ವಿಟ್ಲದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಂಜೀವ ಪೂಜಾರಿ ಭಾಗವಹಿಸಲಿದ್ದಾರೆ.