ವಿಟ್ಲ: ಇಮಾಕ್ಯುಲೇಟ್-ಮಣಿಕಂಠ ಬಸ್ಸುಗಳ ನಡುವೆ ಅಪಘಾತ ನಡೆದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕಡಂಬು ಮೈತ್ರೇಯಿ ಗುರುಕುಲ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ಎರಡು ಬಸ್‘ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಟೈಮಿಂಗ್ಸ್ ವಿವಾದ,ಓವರ್ ಟೇಕ್ ಭರಾಟೆಂಯೊಂದಿಗೆ ಖಾಸಗಿ ಬಸ್, ಬಸ್ ಚಾಲಕರು ಪ್ರಯಾಣಿಕರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದು ಪ್ರತಿನಿತ್ಯ ಸಾರ್ವಜನಿಕರ ಗಮನಕ್ಕೆ ಬರುತ್ತಿದೆ. ಜನರ ಪ್ರಾಣದಲ್ಲಿ ಹಣದಾಹಿ ಚಾಲಕರ ಚೆಲ್ಲಾಟವನ್ನು ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ.
ವಿಟ್ಲ ಪೇಟೆಯಿಂದ ಹೊರಡುವ ಅನೇಕ ಖಾಸಗಿ ಗಳಗೆ ನಿಯಮಿತ ಸ್ಟಾಫ್ಗಳು ಇಲ್ಲ… ವಿಟ್ಲದ ನಾಲ್ಕು ರಸ್ತೆಯ ತಿರುವಿನಲ್ಲಂತೂ ಪದಾಚಾರಿಗಳನ್ನು, ದ್ವಿಚಕ್ರ ವಾಹನ ಸವಾರರನ್ನು ಲೆಕ್ಕಿಸದ ಬಸ್ಸ್ ಡ್ರೈವರ್ಗಳ ಹುಚ್ಚಾಟಕ್ಕೆ ಬಡ ಪ್ರಯಾಣಿಕರು, ಸಾರ್ವಜನಿಕರು ಬಲಿಯಾಗುತ್ತಿದ್ದಾರೆ.
ಇವರ ಈ ನಿರ್ಲಕ್ಷ್ಯದ ಚಾಲನೆಗೆ ಯಾರು ಹೊಣೆ? ಸಾರಿಗೆ ಅಧಿಕಾರಿಗಳೇ ಜನರ ಪ್ರಾಣ ಇನ್ನಾದರೂ ರಕ್ಷಿಸುವಿರಾ.?